ನಿಚ್ಚಪ್ರಸಾದ ಅಚಲನಿರ್ವಯಲಕ್ಕೆ ಪೆಸರು.
ಅಚ್ಚಪ್ರಸಾದ ಅಚಲ-ಅದ್ವಯ-ಅಭಿನ್ನ-ಅಪ್ರಮಾಣಕ್ಕೆ ಪೆಸರು.
ಈ ಉಭಯಸಂಬಂಧವೇ ಸುಮಯವೆನಿಸುವುದು.
ಆ ಸಮಯಪ್ರಸಾದವೆ ಸಚ್ಚಿದಾನಂದ, ಸಮ್ಯಜ್ಞಾನ,
ಸತ್ಕ್ರಿಯಾ ಸದಮಲಾನಂದಕ್ಕೆ ಪೆಸರು.
ಈ ವಿಚಾರವ ಶ್ರುತಿ-ಗುರು-ಸ್ವಾನುಭಾವದಿಂದರಿದು
ಈ ತ್ರಿವಿಧಪ್ರಸಾದವ ಭೋಗಿಸುವ ಶರಣನೆ ನಿಜಪ್ರಸಾದ ನೋಡ.
ಈ ಚತುರ್ವಿಧಪ್ರಸಾದವ ಭೋಗಿಸಬಲ್ಲಾತನೆ
ಸದ್ಗುರುಲಿಂಗಜಂಗಮ ಸ್ವರೂಪು.
ಈ ಸ್ವರೂಪದಿಂದ ಪಡದನುಭವಿಸಬಲ್ಲಾತನೆ
ಆದಿಪ್ರಸಾದಿ, ಅಂತ್ಯಪ್ರಾದಿ, ಸೇವ್ಯಪ್ರಸಾದಿ, ಮಹಾನಿಜಪ್ರಸಾದಿ ನೋಡ.
ಈತನೇ ಪಿಂಡಬ್ರಹ್ಮಾಂಡ ಸಕಲಲೋಕಂಗಳಿಗೆ, ಸಕಲತತ್ವಂಗಳಿಗೆ
ಸಕಲಾಗಮಶಾಸ್ತ್ರಂಗಳಿಗೆ, ಏಕಮೇವಪರಬ್ರಹ್ಮ ಸ್ವರೂಪ ನೋಡ.
ಅವರಾರೆಂದಡೆ :ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರು,
ಮರುಳಶಂಕರ, ಸಿದ್ಧರಾಮಯ್ಯ, ಅಜಗಣ್ಣ ಮುಖ್ಯವಾದ
ಅಸಂಖ್ಯಾತಮಹಾಗಣಂಗಳು ನೋಡಾ, ಸಂಗನಬಸವೇಶ್ವರ.