ಘನಲಿಂಗ, ಅತೀತ, ವಿರಕ್ತಿ-ಈ ಮೂರು ಒಂದಾಗಿ
ಭವತಿಭಿಕ್ಷವ ಕೈಕೊಂಡು
ಉಂಡು ಉಪವಾಸಿ ಆಗಿ, ಬಳಸಿ ಬ್ರಹ್ಮಚಾರಿ ಆಗಿ,
ತತ್ತ್ವಮಂತ್ರೋಪದೇಶವ ಪಸರಿಸಿ,
ಆಚಾರ ಹೆಚ್ಚುಗೊಳಿಸಿ, ನಿಷೆ*ಯೊಳಗಿರ್ದು,
ಕಷ್ಟನಿಷು*ರವನಳಿದು ಸೃಷ್ಟಿಗೆ ಮಿಗಿಲೆನಿಸಿಕೊಂಡು
ಜಗವಾದ ಬಗೆಯ ಅರಿಯದೆ ಬಗೆತಗಿಗೆ ಈಡಾಗಿ
ನಗನಗುತಾ ಸತ್ತುಹೋಯಿತು ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.