ಅಥವಾ
(6) (13) (1) (2) (0) (0) (0) (0) (0) (0) (0) (3) (0) (0) ಅಂ (1) ಅಃ (1) (1) (0) (2) (1) (0) (2) (0) (1) (0) (0) (0) (0) (0) (0) (0) (6) (0) (1) (0) (4) (5) (0) (5) (2) (3) (0) (2) (0) (0) (0) (3) (0) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರೀಮತ್ ಸಚ್ಚಿದಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪವೇ ಮಹಾಂತ ಅಖಂಡಪರಶಿವಬ್ರಹ್ಮದ ನಿಜಚಿದ್ವಿಲಾಸದೊಳಾದ ಬ್ರಹ್ಮಾಂಡಮಂಡಲಕ್ಕೆ ನಡುಗಂಬವಾದ ಬಳಿಕ ಅನಂತ ನರ ನಾಗ ಸುರ ಅಸುರ ಮನು ಮುನಿ ಮನೋವಿಷ್ಟಪ್ರದಾಯಕ ಈರೇಳುಲೋಕಾಧಾರ ಮಹಾಮೇರುಶಿಖರಮಂದಿರಮಂಟಪಮಧ್ಯದೊಳೆಸೆವಾ ನವರತ್ನಸಿಂಹಾಸನಾಗ್ರದಮ್ಯಾಲೆ ಆ ನಿರ್ಬಯಲವೇ ಗಟ್ಟಿಗೊಂಡು ಆ ಅಖಂಡಪರಬ್ರಹ್ಮವೇ ವಿನೋದದೊಳಗೊಂದು ವಿನೋದವಾಗಿ ತಾನೇ ರೂಪದೋರಿ, ಪಂಚಮುಖ ದಶಭುಜ ತ್ರಿಪಂಚನೇತ್ರ ವಿಷಕಂಠ ಗಂಗೋತ್ತುಮಾಂಗ ಚಂದ್ರಮೌಳಿ ಅಹಿಕುಂಡಲಿ ಗಜಚರ್ಮಾಂಬರ ಅರ್ಧನಾರೀಶ ವ್ಯಾಘ್ರಾಜಿನುಡಿಗೆ ಹರಿನಯನಾಂಕಿತ ಪಾದಪಂಕಜ ಶ್ರೀಮನ್‍ಮಹಾದೇವ ಮೂರ್ತಿಗೊಂಡಿರಲು ಅಲ್ಲಿ ಹರಿ ಅಜ ಇಂದ್ರಾದ್ಯಷ್ಟ ದಿಕ್ಪಾಲಕರು ಅಷ್ಟವಸುಗಳು ಹದಿನಾಲ್ಕು ಮನುಗಳು ಎಂಬತ್ತೆಂಟುಕೋಟಿ ಮುನಿಗಳು ಮುನ್ನೂರಾಮೂವತ್ತಾರು ಕೋಟಿ ದೇವತೆಗಳು ಕಿನ್ನರರು ಕಿಂಪುರುಷರು ಗರುಡರು ಗಂಧರ್ವರು ಸಿದ್ಧರು ಸಾಧ್ಯರು ಸಾಧಕರು ಅಪ್ಸರೆಯರು ನಾಗದೇವತೆಗಳು ಮೊದಲಾದ ಅನಂತ ದೇವತೆಗಳು, ಮತ್ತೆ ವೀರೇಶ ನಂದೀಶ ಭೃಂಗೀಶ ವಿಘ್ನೇಶ ಕಾಲಭೈರವ ಮಹಾಕಾಯ ಗಜಕರ್ಣ ಘಂಟಾಕರ್ಣ ಶಂಖಕರ್ಣಾದಿ ವ್ಯಾಘ್ರಮುಖ ಸಿಂಹಮುಖ ವಾಮಮುಖ ಗಜಮುಖಾದಿಯಾದ ಅನಂತ ಮುಖದವರು, ಏಕಾಕ್ಷ ದ್ವಿಯಕ್ಷ, ತ್ರಿಯಕ್ಷ ಶತಾಕ್ಷ ಸಹಸ್ರಾಕ್ಷ ಅನಂತಾಕ್ಷರರು, ಏಕಜಿಹ್ವೆ ದ್ವಿಜಿಹ್ವೆ ತ್ರಿಜಿಹ್ವೆ ಶತಜಿಹ್ವೆ ಸಹಸ್ರಜಿಹ್ವೆ ಮೊದಲಾದ ಅನಂತ ಜಿಹ್ವೆಗಳು, ಏಕ ದ್ವಿತೀಯ ಪಂಚ ಶತ ಸಹಸ್ರನಾಸಿಕ ಮೊದಲಾದ ಅನಂತ ನಾಸಿಕರು, ಇದರಂತೆ ಅನಂತಪಾದ ಅನಂತಬಾಹು ಅನಂತಶಿರ ಮೊದಲಾದ ಗಂಗೆಯ ಮೇಲ್ಗಣಿತಕ್ಕೆ ಮೀರಿದ ಪ್ರಮಥಗಣ ರುದ್ರಗಣ ಅಮರಗಣ ಮಹಾಗಣಂಗಳು, ಓಲೈಸಿ ಮೆರೆಯುವ ವೇದಾಗಮ ಪುರಾಣಶಾಸ್ತ್ರ ಉಪನಿಷತ್ತು ಬಲ್ಲ ಪಾಂಡಿತ್ಯರು ವೇದಾಧ್ಯಯನರು ನವರಸವ ಬಲ್ಲ ಕವಿಗಳು ಗಮಕಿ ವಾದಿ ವಾಗ್ಮಿಗಳು, ರಾಗವಿಶಾರದರಾದ ನಾರದ ತುಂಬುರ ಕಂಬಲ ಅಶ್ವತ್ಥರು, ಪಾಠಕ ಪರಿಹಾಸಕರ ಬಹುನಾಟ್ಯದಿಂ ಭೇರಿ ಮೃದಂಗ ಮೊದಲಾದ ಅನಂತ ನಾದಘೋಷ ಅನಂತ ಮಾಂಗಲ್ಯೋತ್ಸವದಿಂದ ಓಲಗವ ಕೈಕೊಂಡು ಅನಂತ ಸೌಖ್ಯದಲಿ ಪರಮಾತ್ಮನೆನಿಸಿ ಮೆರೆಯುವಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶಿವಜೀವರಿಲ್ಲದಂದು, ಮಂತ್ರತಂತ್ರಗಳಿಲ್ಲದಂದು, ಅಹುದು ಅಲ್ಲ ಇಲ್ಲದಂದು, ನವಬ್ರಹ್ಮ ಷಡುಬ್ರಹ್ಮ ಪಂಚಬ್ರಹ್ಮವಿಲ್ಲದೆ ನಿನ್ನ ನೀ ಅರಿಯದೆ ಅಖಂಡನಾಗಿರ್ದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶ್ರೀಗುರುಬಸವದೇವರು ತರುಣ ಬಾರೆಂದು ಅಂದದಿ ಕರೆದು ಕರುಣಾಜಲದಿ ಮೈದೊಳೆದು, ಶಿರದಿ ಮೇಲೆ ಪ್ರಸನ್ನ ಪರುಷಹಸ್ತವನಿಟ್ಟು, ಶಿಕ್ಷಿಸಿ ದೀಕ್ಷೆಯನೆಸಗಿ ಕರ್ಣದೊಳು ಮಹಾಮಂತ್ರವನೂದಿ ಸದಾಚಾರ ಪೇಳ್ದನೆಂತೆನೆ : ಗಂಧಪ್ರಸಾದದ ನಿವೃತ್ತಿಕಲೆಯ ಕರ್ತೃಸಾದಾಖ್ಯದೊಳು ಸತ್ ಲಕ್ಷಣವೆನಿಸಿತ್ತು. ರಸಪ್ರಸಾದದ ಪ್ರತಿಷಾ*ಕಲೆಯ ಕರ್ಮಸಾದಾಖ್ಯದೊಳು ಚಿತ್ ಲಕ್ಷಣವೆನಿಸಿತ್ತು. ರೂಪಪ್ರಸಾದದ ವಿದ್ಯಾಕಲೆಯ ಮೂರ್ತಿಸಾದಾಖ್ಯದೊಳು ಆನಂದ ಲಕ್ಷಣವೆನಿಸಿತ್ತು. ಸ್ವರೂಪಪ್ರಸಾದದ ಶಾಂತಿಕಲೆಯ ಅಮೂರ್ತಿಸಾದಾಖ್ಯದೊಳು ನಿತ್ಯ ಲಕ್ಷಣವೆನಿಸಿತ್ತು. ಶಬ್ದಪ್ರಸಾದದ ಶಾಂತ್ಯತೀತಕಲೆಯ ಶಿವಸಾದಾಖ್ಯದೊಳು ಪರಿಪೂರ್ಣ ಲಕ್ಷಣವೆನಿಸಿತ್ತು. ತೃಪ್ತಿಪ್ರಸಾದದ ಶಾಂತ್ಯತೀತೋತ್ತರಕಲೆಯ ಮಹಾಸಾದಾಖ್ಯದೊಳು ಅಖಂಡವೆಂಬ ಲಕ್ಷಣವೆನಿಸಿತ್ತು. ಇಂತು ಗುರುನಿರೂಪವ ಕೈಕೊಂಡು ನಿನ್ನ ಭೇದಿಸಿ ನಿನ್ನ ಸಾಧಿಸಿ ನಿನ್ನ ಶೋಧಿಸಿ ನಿನ್ನ ಅರಿದಾ ಬೆಡಗಿನ ಬೆಳಗದೊಳು ನನ್ನ ಮರೆದೆನಯ್ಯ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ