ಅಥವಾ
(8) (2) (1) (0) (1) (0) (0) (0) (1) (0) (0) (3) (1) (0) ಅಂ (5) ಅಃ (5) (4) (0) (2) (0) (0) (1) (0) (3) (0) (0) (0) (0) (0) (0) (0) (8) (0) (2) (1) (2) (1) (0) (3) (4) (5) (0) (0) (0) (1) (5) (2) (0) (10) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅನ್ಯರ ದ್ರವ್ಯವ ಅಪಹರಿಸಿಕೊಂಡಲ್ಲಿ ಅದು ತನಗೆ ಅನ್ಯದೈವ. ತನ್ನ ಕ್ರೀಯಲ್ಲದಲ್ಲಿ ಮನ ಮುಟ್ಟಿ ನೆನೆದಾಗವೆ ಅದು ಅನ್ಯಾಹಾರ. ಇದಿರ ಉಪಚರಿಯಕ್ಕೆ ನಾನೊಂದು ವ್ರತವ ಹಿಡಿದು ನಡೆದೆಹೆನೆಂಬುದೆ ಪರಪಾಕದ ಪಾಕುಳ. ಇಂತಿವರಲ್ಲಿ ಮನ ಹೇಸಿ, ತನು ಕರಗಿ, ಪಕ್ಷಪಾತವೆಂಬ ಪಾತಕವ ಬಿಟ್ಟು, ನಿಶ್ಚಯದಲ್ಲಿ ನಿಂದ ವ್ರತಾಂಗಲಿಂಗಿ ಮತ್ರ್ಯರ ಸುಗುಣ ದುರ್ಗುಣವನೊಲ್ಲ, ನಿತ್ಯಾನಿತ್ಯವ ಮುಟ್ಟಿ ಮತ್ರ್ಯರ ಕರ್ಕಶವನೊಲ್ಲ. ಭಕ್ತಿಯಲ್ಲಿ ತಿಳಿದು, ಜ್ಞಾನದಲ್ಲಿ ನಿಂದು, ವೈರಾಗ್ಯದಲ್ಲಿ ಸಲೆಸಂದು- ಇಂತೀ ತ್ರಿವಿಧದಲ್ಲಿ ನಿಧಾನಿಸಿ ನಿಂದು, ಕ್ರೀಯೇ ಘಟವಾಗಿ, ಆಚಾರವೇ ಆತ್ಮವಾಗಿ, ಅನುಸರಣೆಯಿಲ್ಲದ ನಿಶ್ಚಯವೇ ನಿಜತತ್ವಕೂಟವಾಗಿ ತೊಳಗಿ ಬೆಳಗುತ್ತಿರಬೇಕು, ಏಲೇಶ್ವರಲಿಂಗದಲ್ಲಿ.
--------------
ಏಲೇಶ್ವರ ಕೇತಯ್ಯ
ಅಂಧಕ ವ್ರತಿಯಲ್ಲ, ಪಂಗುಳ ಕ್ರೀವಂತನಲ್ಲ, ಕುಟಿಲ ಸದೈವಭಕ್ತನಲ್ಲ. ಇಂತೀ ಗುಣವೆ [ದೃಷ್ಟ], ದೃಷ್ಟದಲ್ಲಿಯೇ ದೃಷ್ಟವ ಕಂಡು, ಅಂಧಕ, ಪಂಗುಳ, ಕುಟಿಲ ಈ ಮೂರಕ್ಕೆ ವ್ರತದಂಗವೊಂದೂ ಇಲ್ಲ, ಇದಕ್ಕೆ ಏಲೇಶ್ವರಲಿಂಗವೆ ಸಾಕ್ಷಿ.
--------------
ಏಲೇಶ್ವರ ಕೇತಯ್ಯ
ಅಂಗ ಸರ್ವಾಂಗಭಾವವ ಮುಟ್ಟುವಲ್ಲಿ, ಆ ಭಾವ ತನ್ನಯ ಕ್ರೀಯ ನಿಬದ್ಧಿಸಿ ಹಿಡಿವಲ್ಲಿ, ಬಾಹ್ಯದ ಕ್ರೀ, ಅಂತರಂಗದ ಅರಿವು, ಉಭಯ ಏಕ ಸನ್ಮತವಾಗಿ, ಸರ್ವವ್ಯವಧಾನಂಗಳಲ್ಲಿ ಸರ್ವವ ಹಿಡಿದುಬಿಡುವಲ್ಲಿ, ತನ್ನ ಕ್ರೀಗೆ ಒಳಗಾದುದ ಒಡಗೂಡುವಲ್ಲಿ, ಸಹಭೋಜನದ ಸಮವನರಿತು, ಭರಿತಾರ್ಪಣವ ಅರ್ಪಿತವನರಿತು, ತಾ ಲಕ್ಷಿಸಿದ ವ್ರತದ ಕಟ್ಟಳೆಯ ಕಂಡು ತನು ಕ್ರೀಯಲ್ಲಿ ಶುದ್ಧವಾಗಿ, ಆತ್ಮ ಅರಿವಿನಲ್ಲಿ ಶುದ್ಧವಾಗಿ, ಅರಿವು ಆಚಾರದಲ್ಲಿ ಲೀಯವಾಗಿ, ಆ ಸದ್ಭಾವವೆ ಏಲೇಶ್ವರಲಿಂಗದ ವ್ರತದ ಸಂಬಂಧ.
--------------
ಏಲೇಶ್ವರ ಕೇತಯ್ಯ
ಅಂಗವಾರು ಗುಣದಲ್ಲಿ ಹರಿದಡೆ, ಲಿಂಗ ಮೂರೆಂದು ಕಂಡಡೆ, ಆತ್ಮ ಹಲವೆಂದು ನೋವ ಕಂಡಡೆ, ಎನ್ನ ವ್ರತಕ್ಕೆ ಅದೇ ಭಂಗ. ಒಂದ ದೃಢವೆಂದು ಹಿಡಿದಲ್ಲಿ ನಾನಾ ವ್ರತ ನೇಮ ಅಲ್ಲಿ ಸಂದಿಪ್ಪವು. ಇದಕ್ಕೆ ಸಂದೇಹವಿಲ್ಲ, ಏಲೇಶ್ವರಲಿಂಗದಾಣತಿ
--------------
ಏಲೇಶ್ವರ ಕೇತಯ್ಯ
ಅಂಗಕ್ಕೆ ಕ್ರೀಯ ಅಂಗೀಕರಿಸಿದಲ್ಲಿ ಮನಕ್ಕೆ ಮುನ್ನವೆ ವ್ರತವ ಮಾಡಬೇಕು. ಆ ವ್ರತಕ್ಕೆ ಮುನ್ನವೆ ತಟ್ಟು-ಮುಟ್ಟು ತಾಗು-ಸೋಂಕು ಬಪ್ಪುದನರಿಯಬೇಕು. ಅವು ಬಂದು ಸೋಂಕಿದ ಮತ್ತೆ ಅಂಗವ ಬಿಟ್ಟೆಹೆನೆಂಬುದೆ ವ್ರತಕ್ಕೆ ಭಂಗ. ಇಂತೀ ಸಂದು ಸಂಶಯವನರಿಯಬೇಕೆಂದು ಅಂಗಕ್ಕೆ, ಕ್ರೀ ಆತ್ಮಂಗೆ ಅರಿವಿಂಗೆ ನೆರೆ ವ್ರತವ ಸೋಂಕಿಂಗೆ ಹೊರಗಾಗಿ ಮಾಡಬೇಕು, ಏಲೇಶ್ವರಲಿಂಗದಲ್ಲಿ ವ್ರತಸ್ಥನಾಗಬಲ್ಲಡೆ.
--------------
ಏಲೇಶ್ವರ ಕೇತಯ್ಯ
ಅನ್ನ-ಉದಕಕ್ಕೆ, ನನ್ನಿಯ ಮಾತಿಗೆ, ಚೆನ್ನಾಯಿತ್ತು ಒಡೆಯರ ಕಟ್ಟಳೆ. ಮಿಕ್ಕಾದವಕ್ಕೆ ಗನ್ನವ ಮಾಡಿ- ಈ ಬಣ್ಣ ಬಚ್ಚಣೆಯ[ಲ್ಲಿ] ನಡೆವ ಕನ್ನಗಳ್ಳರ ಶೀಲ ಇಲ್ಲಿಗೆ ಅಲ್ಲಿಗೆ ಮತ್ತೆಲ್ಲಿಗೂ ಇಲ್ಲ. ಏಲೇಶ್ವರಲಿಂಗವು ಅವರವೊಲ್ಲನಾಗಿ.
--------------
ಏಲೇಶ್ವರ ಕೇತಯ್ಯ
ಅಳಿಮೇಳ ಚರ್ಚಗೊಟ್ಟಿ Zõ್ಞವಟತನಕಾಗಿ ವ್ರತದಾಳಿಯ ಮಾಡಿಕೊಳ್ಳದೆ ತನುವಿಗೆ ಕಟ್ಟು, ಮನಕ್ಕೆ ವ್ರತ, ಸರ್ವೇಂದ್ರಿಯ ವಿಸರ್ಜನವಾಗಿ ಮಾಡಿಕೊಂಬುದೆ ಸ್ವಯವ್ರತ. ಈ ಗುಣ ಏಲೇಶ್ವರಲಿಂಗಕ್ಕೆ ವ್ರತದ ಸುಪಥದ ಪಥ.
--------------
ಏಲೇಶ್ವರ ಕೇತಯ್ಯ
ಅಂಗಕ್ಕೆ ಆಚರಣೆ, ಮನಕ್ಕೆ ನಿರ್ಮಲ ಮನೋಹರವಾಗಿ, ಸಕಲದ್ರವ್ಯಪದಾರ್ಥಂಗಳ ಬಾಹ್ಯದಲ್ಲಿ ಕಂಡು, ಅಂತರಂಗದಲ್ಲಿ ಪ್ರಮಾಣಿಸಿ, ತನ್ನ ಭಾವಕ್ಕೆ ಒಪ್ಪಿದುದ ಒಪ್ಪಿ, ಅಲ್ಲದುದ ಬಿಟ್ಟ ನಿಶ್ಚಯ ನಿಜವ್ರತಾಂಗಿ ಜಗದ ಹೆಚ್ಚು ಕುಂದಿನವರ ಭಕ್ತರೆಂದು ಒಪ್ಪುವನೆ? ಏಲೇಶ್ವರಲಿಂಗವಾಯಿತ್ತಾದಡು ಕಟ್ಟಳೆಯ ವ್ರತಕ್ಕೆ ಕೃತ್ಯದೊಳಗಾಗಿರಬೇಕು.
--------------
ಏಲೇಶ್ವರ ಕೇತಯ್ಯ