ನಾನಾ ಭೇದದ ವ್ರತವ ಸಾಧಿಸಿ ಭೇದಿಸಿ ವೇಧಿಸುವಲ್ಲಿ,
ಬಾಹ್ಯ ಅಂತರಂಗದಲ್ಲಿ ಉಭಯ ಏಕವಾಗಿ,
ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಕೊಂಡ ವ್ರತಕ್ಕೆ ಭಿನ್ನಭಾವವಿಲ್ಲವೆ,
ಎಲ್ಲಾ ಎಚ್ಚರಿಕೆಯಲ್ಲಿ ಬಲ್ಲವನಾಗಿ,
ಅರಿದುದ ಬಿಟ್ಟು ಮರದೆನೆಂದು ಮತ್ತೆ ಅರಿದು ನಡೆದೆಹೆನೆಂಬುದು
ಆ ವ್ರತಕ್ಕೆ ಅದೆ ಮರವೆಯಲ್ಲವೆ?
ಜೇಡನ ಮುಂದಣ ನೇಯಿಗೆಯ ನೂಲೆ? ಸಂಪುಟದ ಲೇಖನವೆ?
ಲೋಹದ ಭಾವವೆ?
ಅದು ಕುಂಭದ ಭಿನ್ನದಂತೆ, ಮೌಕ್ತಿಕದ ಸಂದಿನಂತೆ.
ವ್ರತ ತಪ್ಪಿದಲ್ಲಿಯೆ ತಪ್ಪನೊಪ್ಪಲಿಲ್ಲ,
ಏಲೇಶ್ವರಲಿಂಗವಾದಡೂ ಧಿಕ್ಕರಿಸಿ ಬಿಡುವೆನು.