ಅಥವಾ
(8) (2) (1) (0) (1) (0) (0) (0) (1) (0) (0) (3) (1) (0) ಅಂ (5) ಅಃ (5) (4) (0) (2) (0) (0) (1) (0) (3) (0) (0) (0) (0) (0) (0) (0) (8) (0) (2) (1) (2) (1) (0) (3) (4) (5) (0) (0) (0) (1) (5) (2) (0) (10) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕ್ರೀಗುಣ ಶುದ್ಧವಾದಲ್ಲಿ ಭಾವಗುಣ ಶುದ್ಧ. ಆ ಸದ್ಭಾವದ ದೆಸೆಯಿಂದ ವಿಮಲಜ್ಞಾನ. ಆ ಸುಜ್ಞಾನ ಸೂತ್ರವಾಗಿ ತ್ರಿವಿಧಭೇದವಾಯಿತ್ತು. ಆ ತ್ರಿವಿಧದ ಸೂತ್ರದಿಂದ ಷಡುಸ್ಥಲವಾಯಿತ್ತು. ಆ ಷಡುಸ್ಥಲದ ಭಾವಂಗಳೆ ಬ್ಥಿನ್ನಭಾವವಾಗಿ ನಾನಾ ಸ್ಥಲಭೇದ ವ್ರತವಾಯಿತ್ತು. ಆ ವ್ರತದ ಲಕ್ಷಣವನರಿತು ಆವಾವ ಕ್ರೀಯಲ್ಲಿ ಆವಾವ ಭಾವಶುದ್ಧವಾಗಿ, ಕೃತ್ಯಕ್ಕೆ ಕಟ್ಟಳೆಯಾಗಿ, ನೇಮಕ್ಕೆ ನಿಶ್ಚಯವಾಗಿ ವ್ರತದಾಳಿಯ ತಪ್ಪದಿಪ್ಪ ಭಕ್ತನಲ್ಲಿ ಏಲೇಶ್ವರಲಿಂಗವು ನಿಶ್ಚಯವಾಗಿಪ್ಪನು.
--------------
ಏಲೇಶ್ವರ ಕೇತಯ್ಯ
ಕ್ರೀ ನಿಃಕ್ರೀಯೆಂಬ ಉಭಯವಾವುದು? ತನ್ನನರಿತಲ್ಲಿ ಕ್ರೀ, ತನ್ನ ಮರೆದಲ್ಲಿ ನಿಃಕ್ರೀ. ನಾನೆಂಬುದುಳ್ಳನ್ನಕ್ಕ ಸರ್ವಕ್ರೀ ಸಂಭ್ರಮಿಸಬೇಕು, ನಾನೆಂಬುದೆನೂ ತೋರದಲ್ಲಿ ಕ್ರೀಯೆಂಬುದೇನೂ ಇಲ್ಲ. ಇಂತೀ ಭಾವವ ತಿಳಿದು ನಿಮ್ಮ ನೀವೆ ನೋಡಿಕೊಳ್ಳಿ, ಜಿಡ್ಡ ಜಿಗುಡೆಂಬ ಸಂದೇಹವ ತಾನುಂಡು ತೇಗಿದಂತೆ. ಇದಕ್ಕೆ ಸಂದೇಹವಿಲ್ಲ. ಏಲೇಶ್ವರಲಿಂಗವೇ ಸಾಕ್ಷಿ.
--------------
ಏಲೇಶ್ವರ ಕೇತಯ್ಯ
ಕ್ರೀಯ ಅನುವನರಿದಾತ ಗುರುವೆಂಬೆ, ಕ್ರೀಯ ಅನುವನರಿತುದು ಲಿಂಗವೆಂಬೆ, ಕ್ರೀಯ ಅನುವನರಿದಾತ ಜಂಗಮವೆಂಬೆ. ಇಂತೀ ತ್ರಿವಿಧಮೂರ್ತಿ ಆಚಾರಕ್ಕೆ ಅನುಕೂಲವಾಗಿ ಬಂಗಾರದೊಳಗೆ ಬಣ್ಣವಡಗಿದಂತೆ, ಆ ಬಣ್ಣವೇಧಿಸಿ ಬಂಗಾರವಾದಂತೆ. ಇಂತು ಆಚಾರಕ್ಕೂ ಅರಿವಿಂಗೂ ಪಡಿಪುಚ್ಚವಿಲ್ಲವಾಗಿ, ಆಚಾರವೆ ಕುಲ, ಅನಾಚಾರವೇ ಹೊಲೆ. ಇದಕ್ಕೆ ಒಲವರವಿಲ್ಲ, ಏಲೇಶ್ವರಲಿಂಗವ ಕೇಳಲಿಲ್ಲ.
--------------
ಏಲೇಶ್ವರ ಕೇತಯ್ಯ
ಕೀಳು ಲೋಹದ ಮೇಲೆ ಮೇಲು ಚಿನ್ನವ ತೊಡೆದಡೆ, ಅದು ಸ್ವಯಂಭು ಹೇಮವಪ್ಪುದೆ? ಹೆಣ್ಣು ಹೊನ್ನು ಮಣ್ಣು ಕುರಿತು ಕುಜಾತಿಗನ್ನಕ್ಕೆ ಶೀಲವಂತನಾದವ ನನ್ನಿಯ ವ್ರತದ ದೆಸೆಯ ಬಲ್ಲನೆ? ಇಂತೀ ಗನ್ನರನರಿದು, ಇಂತೀ ನಿಜಪ್ರಸನ್ನರ ಕಂಡು, ಉಭಯದ ಬಿನ್ನಾಣದ ವ್ರತದ ಬೆಸುಗೆಯ ತ್ರಿಕರಣಕ್ಕೆ ಅನ್ಯವಿಲ್ಲದೆ ಮಾಡಬೇಕು. ಏಲೇಶ್ವರಲಿಂಗಕ್ಕೆ ವ್ರತಕ್ಕೆ ಆಚಾರ್ಯನಾಗಬಲ್ಲಡೆ.
--------------
ಏಲೇಶ್ವರ ಕೇತಯ್ಯ