ಅಥವಾ
(8) (2) (1) (0) (1) (0) (0) (0) (1) (0) (0) (3) (1) (0) ಅಂ (5) ಅಃ (5) (4) (0) (2) (0) (0) (1) (0) (3) (0) (0) (0) (0) (0) (0) (0) (8) (0) (2) (1) (2) (1) (0) (3) (4) (5) (0) (0) (0) (1) (5) (2) (0) (10) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಪ್ರಸಾದಿ ಆ ಪ್ರಸಾದವ ಲಿಂಗಕ್ಕೆ ಅರ್ಪಿಸಲಾಗದು, ಲಿಂಗಪ್ರಸಾದಿ ಆ ಪ್ರಸಾದವ ಜಂಗಮಪ್ರಸಾದದಲ್ಲಿ ಕೂಡಲಾಗದು. ಇಂತೀ ತ್ರಿವಿಧಪ್ರಸಾದವ ತಾ ಸ್ವೀಕರಿಸುವಲ್ಲಿ ತನ್ನ ದೃಷ್ಟದ ಇಷ್ಟಕ್ಕೆ ಅರ್ಪಿಸದೆ ಮುಟ್ಟಲಾಗದು. ಇಂತೀ ಭಾವ ಅಮೃತದಲ್ಲಿ ವಿಷ ಬೆರೆದಂತೆ: ಅಮೃತವ ಚೆಲ್ಲಬಾರದು, ವಿಷವ ಮುಟ್ಟಬಾರದು. ಗೋವು ಮಾಣಿಕವ ನುಂಗಿದಂತೆ: ಗೋವ ಕೊಲ್ಲಬಾರದು, ಮಾಣಿಕವ ಬಿಡಬಾರದು. ಗೋವು ಸಾಯದೆ ಮಾಣಿಕ ಕೆಡದೆ ಬಹ ಹಾದಿಯ ಬಲ್ಲಡೆ ಆತ ತ್ರಿವಿಧ ಪ್ರಸಾದಿಯೆಂಬೆ. ಆ ಗುಣ ಏಲೇಶ್ವರಲಿಂಗಕ್ಕೂ ಅಸಾಧ್ಯ ನೋಡಾ!
--------------
ಏಲೇಶ್ವರ ಕೇತಯ್ಯ
ಗುರುಪ್ರಸಾದವ ಕೊಂಬಲ್ಲಿ ಇಹವನರಿಯಬೇಕು, ಲಿಂಗಪ್ರಸಾದವ ಕೊಂಬಲ್ಲಿ ಪರವನರಿಯಬೇಕು, ಜಂಗಮಪ್ರಸಾದವ ಕೊಂಬಲ್ಲಿ ಇಹಪರ ಉಭಯವನರಿತು ಸ್ವೀಕರಿಸಬೇಕು. ಗಣಪ್ರಸಾದವ ಸಮೂಹದಲ್ಲಿ ಕೊಂಬಲ್ಲಿ, ರಾಜಸ ತಾಮಸ ಸಾತ್ವಕವಂ ಅರಿದು ಕೊಂಬಲ್ಲಿ ತ್ರಿವಿಧವಂ ಮರೆದು, ಅಜೀರ್ಣ ಮನ ಮುಂತಾದ ಮಿಕ್ಕಾದ ತೊಡಕಿಂಗೆ ಒಡಲಲ್ಲದೆ, ವಡಬಾನಳನಂತೆ, ಉರಿಯ ಒಡಲಿನಂತೆ, ಆಕಾಶವನವಗವಿಸಿದ ಗೋಳಕಾಕಾರದಂತೆ, ಕುರುಹಿಂಗೆ ಒಡಲಿಲ್ಲದೆ ಕೊಂಡುದು ಗಣಪ್ರಸಾದ. ಹೀಂಗಲ್ಲದೆ ಹುಲಿ ಹಾಯಿದ ಗೋವ ಹಲವು ನರಿಗಳು ಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋದಂತಾಗಬೇಡ. ಎನಗಿನಿತು ಒಲವರವೆಂದು ನೋಯಬೇಡ. ಇದು ಏಲೇಶ್ವರಲಿಂಗದ ವ್ರತದಂಗದ ಹೊಲಬಿನ ಹಾದಿ.
--------------
ಏಲೇಶ್ವರ ಕೇತಯ್ಯ