ಭೂತಭವಿಷ್ಯದ್ವರ್ತಮಾನಕ್ಕೆ ಮುನ್ನವೆ
ಅನಾದಿಯಲ್ಲಿ ಆದ ಜಿನೇಶ್ವರನೆಂದಿದ್ದೆ.
ಆದಿ ನಾರಾಯಣನ ಅವತಾರ ತ್ರಿಪುರಸಂಹಾರದಿಂದೀಚೆ.
ಆದ ಕುಟಿಲ ನಾಮದಿಂದ
ದ್ವಾದಶ ಸಹಸ್ರ ಶ್ರುತಿ ಕುಟಿಲವಂ ಮಾಡಿ,
ತ್ರಿಪುರ ನಿಲಬೇಕೆಂಬುದಕ್ಕೆ ಮೊದಲೆ,
ಅಸತ್ಯ ಗೆಲಬೇಕೆಂಬುದಕ್ಕೆ [ಮೊದಲೆ],
ಶಿವನಿಲ್ಲಾ ಎಂದು ನುಡಿಯಲಾ ಸೊಲ್ಲಿಂಗೆ
ಎಲ್ಲರೂ ಕಲಿತು ಗೆಲ್ಲ ಸೋಲಕ್ಕೆ ಹೋರಿ,
ಬಲ್ಲತನವಿಲ್ಲದೆ ಬಸದಿಯ ನಿಳಯವಂ ಪೊಕ್ಕು,
ಹಿಸಿದಲೆಯಲ್ಲಿ ಗಸಣಿಗೊಳಲಾರದೆ,
ನಿಶಿತಮಯ ಕರ್ಮ ಘಟದೂರ
ಕುಟಿಲಹರ ಸ್ಫಟಿಕ ಘಟದಂತಿಪ್ಪ ವರ್ಣಭೇದ ನೀನೆ,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.