ಕಾಯಕ್ಕೆ ಸೋಂಕು ಸುಖ, ಜಿಹ್ವೆಗೆ ಮಧುರ ಸುಖ.
ದೃಕ್ಕಿಗೆ ಚಿತ್ರಭೇದ ಸುಖ, ಶ್ರೋತ್ರಕ್ಕೆ ನಾದ ಶಬ್ದ ಸುಖ.
ಘ್ರಾಣಕ್ಕೆ ಸುಗಂಧ ಸುಖ.
ಇಂತಿವೆಲ್ಲವನರಿದು, ಕೊಡುವ ಭೇದದಲ್ಲಿ ಕೊಟ್ಟು
ಅರ್ಪಿತ ಅವಧಾನಿಯಾಗಿರಬೇಕೆಂಬರು.
ಬಹುಭೇದವಂ ತಿಳಿದು, ಏಕೇಂದ್ರಿಯ ಸುಚಿತ್ತನಾಗಿ ಇದ್ದವಂಗೆ
ಕ್ರೀ ಜ್ಞಾನ ಸಮರ್ಪಣ ಏಣಾಂಕಧರ ಸೋಮೇಶ್ವರಲಿಂಗಕ್ಕೆ.