ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನ್ನ ಮರೆದಲ್ಲಿ ಲಿಂಗವ ಮರೆಯಬೇಕು. ತನ್ನನರಿತಲ್ಲಿ ಲಿಂಗವನರಿಯಬೇಕು. ಉಭಯಭಾವ ಅಳವಟ್ಟಲ್ಲಿ ಮುಂದಕ್ಕೊಂದು ಕುರುಹು ಏನೂ ಎನಲಿಲ್ಲ. ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ ಕುರುಹಾಗುತ್ತಿದ್ದಿಹಿತ್ತು.
--------------
ಬಿಬ್ಬಿ ಬಾಚಯ್ಯ
ತನುವಿನಲ್ಲಿ ಹಿಡಿದು, ಮನದಲ್ಲಿ ಅರಿದು ಜ್ಞಾನದಲ್ಲಿ ಕಂಡು, ಮಹಾಪ್ರಕಾಶದಲ್ಲಿ ಕೂಡಿ ಭೇದಭಾವವಿಲ್ಲದಿರಬೇಕು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಸಂಬಂಧಿಯಾಗಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ತಾನರಿದಲ್ಲಿ ಸಕಲವೆಲ್ಲ ತನ್ನೊಳಗಡಗಿತ್ತು. ತಾ ಮರೆದಲ್ಲಿ ಸಕಲವ್ಯಾಪಾರ ತನ್ನಿರವಾಯಿತ್ತು. ನಿಂದ ವಾರಿಯಲ್ಲಿ ಹಾವಸೆ ತನ್ನಿಂದ ಒದಗಿದಂತೆ, ಚರಿಸೆ ಹಾವಸೆ ಹರಿದು ನಿರ್ಮಲವಾದಂತೆ, ಅರಿವು ಮರವೆ ಬೇರೊಂದೆಡೆಯಿಲ್ಲ. ಎಲೆ ಗಿಡು ಮುಳ್ಳಿನಂತೆ, ಉರಿ ಮಥನ ಕಾಷ*ದಂತೆ, ಶಿಲೆ ಕುರುಹು ರೂಪಿನಂತೆ, ಫಲ ಖಲದಂತೆ, ನಿರುತ ನಿಳಯದಂತೆ, ಭರತ ಶಬ್ದದಂತೆ, ಜೀವ ನಾದದಂತೆ ಉಭಯ ಭಿನ್ನವಿಲ್ಲ. ಏಣಾಂಕಧರ ಸೋಮೇಶ್ವರಲಿಂಗವೆಂಬುದು ಅಲ್ಲಿಯೇ ಭಾವವಿರಹಿತವಾಯಿತ್ತು.
--------------
ಬಿಬ್ಬಿ ಬಾಚಯ್ಯ
ತಾರಕ ನುಂಗಿದ ಜಲವ, ಬೇರೆ ಶೋಧಿಸಲುಂಟೆ ಅಯ್ಯಾ ? ಉರಿಯುಂಡ ಘೃತವ ಅಳೆವುದಕ್ಕೆ ಈಡುಂಟೆ ಅಯ್ಯಾ ? ನಿಶ್ಚಯ ನಿಜವ ಗೊತ್ತಿಂಗೆ ತರಬಹುದೆ ಅಯ್ಯಾ ? ಇಷ್ಟ ವಸ್ತುವಿನಲ್ಲಿ ಲೇಪವಾಗಿ ಮತ್ತೊಂದು ಕುರುಹಿಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ.
--------------
ಬಿಬ್ಬಿ ಬಾಚಯ್ಯ
ತನುವಿನ ಇಷ್ಟವ ಬಿಟ್ಟಾಗ ಅರಿದು, ಕಟ್ಟಿದಾಗ ಮರೆದು ಮತ್ತೆ ಸೋಂಕಿದ ಸುಖವ ಅರ್ಪಿಸುವ ಪರಿಯಿನ್ನೆಂತೊ ? ಒರೆಯ ಮರೆಯ ಕೈದಿನಲ್ಲಿ ಕಡಿದಡೆ ಹರಿದುದುಂಟೆ ? ಕುರುಹಿನ ಮರೆಯಲ್ಲಿದ್ದಾತನ, ಎರಡಳಿದು ಅವಧಿಯಿಲ್ಲದಿರಬೇಕು ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯಾಗಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ತಿಲದ ಮರೆಯ ತೈಲವ ಅರೆದು ಕಾಬಂತೆ ಚಂದನದ ಮರೆಯ ಗಂಧವ ಬಂಧಿಸಿ ಕಾಬಂತೆ [ಶೃಂ]ಗಿಯ ನಾದವ ಖಂಡಿಸಿ ಅರಿವಂತೆ ಇಷ್ಟಜ್ಞಾನವನರಿವುದಕ್ಕೆ ಇದೇ ದೃಷ್ಟ. ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ.
--------------
ಬಿಬ್ಬಿ ಬಾಚಯ್ಯ