ತಾನರಿದಲ್ಲಿ ಸಕಲವೆಲ್ಲ ತನ್ನೊಳಗಡಗಿತ್ತು.
ತಾ ಮರೆದಲ್ಲಿ ಸಕಲವ್ಯಾಪಾರ ತನ್ನಿರವಾಯಿತ್ತು.
ನಿಂದ ವಾರಿಯಲ್ಲಿ ಹಾವಸೆ ತನ್ನಿಂದ ಒದಗಿದಂತೆ,
ಚರಿಸೆ ಹಾವಸೆ ಹರಿದು ನಿರ್ಮಲವಾದಂತೆ,
ಅರಿವು ಮರವೆ ಬೇರೊಂದೆಡೆಯಿಲ್ಲ.
ಎಲೆ ಗಿಡು ಮುಳ್ಳಿನಂತೆ, ಉರಿ ಮಥನ ಕಾಷ*ದಂತೆ,
ಶಿಲೆ ಕುರುಹು ರೂಪಿನಂತೆ, ಫಲ ಖಲದಂತೆ,
ನಿರುತ ನಿಳಯದಂತೆ, ಭರತ ಶಬ್ದದಂತೆ,
ಜೀವ ನಾದದಂತೆ ಉಭಯ ಭಿನ್ನವಿಲ್ಲ.
ಏಣಾಂಕಧರ ಸೋಮೇಶ್ವರಲಿಂಗವೆಂಬುದು
ಅಲ್ಲಿಯೇ ಭಾವವಿರಹಿತವಾಯಿತ್ತು.