ಆ ಪದದಿಂದ ಪ್ರಾರಂಭವಾಗುವ ವಚನಗಳು:
ಆಜ್ಞೆ ಸಹಿತೆ ಗುರು, ಆಜ್ಞೆ ಸಹಿತೆ ಲಿಂಗ,ಆಜ್ಞೆ ಸಹಿತೆ ಜಂಗಮ, ಆಜ್ಞೆ ಸಹಿತೆ ಭಕ್ತ,ಆಜ್ಞೆ ಸಹಿತೆ ದಾಸೋಹಿ,ಆಜ್ಞೆ ಸಹಿತೆ ಅರುವತ್ತಾರು ಶೀಲ.ಆಜ್ಞೆ ಸಹಿತೆ ವ್ರತ ನೇಮ ನಿತ್ಯ,ಆಜ್ಞೆ ಯನತಿಗಳೆದವ ಅನಾಚಾರಿ,ಅವನ ಮುಖವ ನೋಡಲಾಗದುಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಆದಿಯ ಪರಮೇಶ್ವರ ತನ್ನ ವಿನೋದಾರ್ಥಕಾರಣಕ್ಕಾಗಿಮತ್ರ್ಯಲೋಕದೊಳು ರೂಪಾಗಿ ಸುಳಿದರೆಭೇದವ ಮಾಡಿ ನುಡಿವ ದರುಶನ ಪರವಾದಿಗಳ ಬಾಯಲ್ಲಿಪಾದರಕ್ಷೆಯನಿಕ್ಕುವೆ ಕಾಣಾಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.