ಕ ಪದದಿಂದ ಪ್ರಾರಂಭವಾಗುವ ವಚನಗಳು:
ಕಾಲದಗಂಡ, ಕರ್ಮದಗಂಡ, ವಿದ್ಥಿಯಗಂಡ,ವಿಶಸನದಗಂಡ, ಇಹದಗಂಡ, ಪರದಗಂಡ,ಅಂಗದ ಮೇಲೆ ಲಿಂಗವ ಧರಿಸಿ ಸಾವಿಗಂಜುವರೆ ?ಸಂದೇಹಿಯಗಂಡ, ಸಂದೇಹ ನಿರ್ಲೇಪಕ್ಕೆ ಶರಣೈಕ್ಯಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕಾಲನ ಸುಟ್ಟ ಭಸಿತವಲ್ಲ.ಕ್ರಮದಿಂದ ಕಾವನ ಸುಟ್ಟ ಭಸಿತವಲ್ಲ.ತ್ರಿಶೂಲಧರ ತ್ರಿಪುರವ ಸುಟ್ಟ ಭಸಿತವಲ್ಲ.ತ್ರಿಜಗವ ನಿರ್ಮಿಸಿದ ಭಸಿತವ ತಿಳಿದುಲಲಾಟಕ್ಕೆ ಧರಿಸಲು ತ್ರಿಯಂಬಕ ಕಾಣಾಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕಿರುಕುಳ ದೈವದ ಹರಕೆ ಹಲ್ಲಣೆಯ ಮಾಡುವಕಿವಿಹರಕುಮುರಿಕೆಯ ಮನೆಯ ಅನ್ನನರಕದಾಯೆಡೆಗೆಂದು ಅರಿತು ಭುಂಜಿಸದೆನಿರುತ ವೀರಶೈವ ಭಕ್ತರನು ಬೆರೆತು ಬೆರೆತುಬಾಳುವರು ದೇವರ್ಕಚಂದ್ರನುಳ್ಳನಕ ಕಾಣಾಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕತ್ತಿಯ ಕಟ್ಟಿ ಗದ್ರ್ದಿಸಿ ಕಾಳಗದೊಳು ಕುಳಿಯ ಗೆದ್ದುಪ್ರಾಣವ ತುಂಬಿ ಕೈಲಾಸಕಟ್ಟುವಕೂಳಿಯ ಮರುಳಶಂಕರದೇವರಿಗೆಬಿಟ್ಟಮಂಡೆಯ ಗಂಗಾಧರದೇವರಿಗೆಪಟ್ಟವ ತೊರದು ಗಂಡನ ಜರದ ಅಕ್ಕಮಹಾದೇವಿಗೆನಿಷೆ* ನಿರ್ವಾಣ ಬೋಳೇಶ್ವರದೇವರಿಗೆಶರಣು ಶರಣಾರ್ಥಿಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕಾಲ ಕಾಮನ ಗೆಲುವುದಕ್ಕೆಉಪಾಯವಿದೇನೆಂದು ಆಲೋಚನೆಯ ಮಾಡುವೆಯ ಮನವೆ ?ನರಿ ನಾಯ ಜಗಳಕ್ಕೆ ಆನೆಯ ಪವುಜನದಕಿಕ್ಕುವರೆ ಮನವೆ ?ಸುಜ್ಞಾನವೆಂಬ ಆನೆಯನೇರಿಅಜ್ಞಾನವೆಂಬ ನಾಯಿಗಳಿಗೆ ಅಂಜದಿರು ಮನವೆ,ಅಳುಕದಿರು ಮನವೆ.ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕಂದನಕೊಂದು ಶಿವಗುಣಲಿಕ್ಕಿ ಕರುಣವ ಪಡದುಕಂಚಿಯಪುರವ ಕೈಲಾಸಕೊಯಿದ ಸಿರಿಯಾಳ-ಚಂಗಳೆ.ಸಿಂಧುಬಲ್ಲಾಳ ಶಿವಗೆ ಸತಿಯಕೊಟ್ಟರೆ ಶಿವ ಶಿಶುವಾದ,ಬಲ್ಲಿದ ಗಣಪತಿಯಾದ.ತಂದೆಯ ತಲೆಯ ಹೊಡೆದು ತಡೆಯದೆರಜತಗಿರಿಗೆಯಿದಿದ ಗೊಲ್ಲಾಳ, ಸಿರಿಯಾಳ ಸಿಂಧುಬಲ್ಲಾಳಂಗೆಶರಣು ಶರಣಾರ್ಥಿಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕುಗ್ಗಿನ ಕುಳಿ, ಸಿಳ್ಳಿನ ಗುಳ್ಳೆ, ಸೀಳ್ವಿನ ಕೋವಿ,ನಾರು ಹೋಮ ಬುಗ್ಗಿಚ್ಚುಗುಟ್ಟಿತಗ್ಗಿನ ಡೊಗರಿನೊಳು ಬಿದ್ದುಸಿಗ್ಗಡಿಯದೆ ಸಿಕ್ಕದ ಶಿಖಂಡಿ ಮುಗ್ಗುಲಮುದಿಮೂಕೊರೆಯನ ಮುಖವ ನೋಡಲಾಗದು ಕಾಣಾಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕುಲಗೇಡಿ ಖೂಳರಿಗೆ ದೀಕ್ಷವ ಕೊಟ್ಟರೆ ಛಲ ವ್ರತವಿಲ್ಲ.ಬಲುಕುಂಬಳದ ಕಾಯಿಗೆ ಕಟ್ಟ ಹಾಕಿದರೆಕೊಳತಂತಾಯಿತ್ತು ಸಲೆಯವನ ಮನೆಯ ಅನ್ನ.ಹಲಬರಿಗೆ ಉರುಳುವ ಹದಿನೆಂಟು ಜಾತಿಯ ಸೂಳೆಯಮಗಮಹಳವ ಮಾಡಿದರೆ ಅದು ಗಂಡಗಲ್ಲ ಮಿಂಡಗಲ್ಲ ಕಾಣಾಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕ್ಷುದ್ರ ಕುಚೇಷ್ಟೆ ಕುಟಿಲವ ಛಿದ್ರವೀತವಮಾಡುವಭದ್ರಬಲವ ಕೊಡುವ ರುದ್ರಾಕ್ಷಿಯ ಧರಿಸಿದ ಭಕ್ತರನಿದ್ರೆ ಸುಷುಪ್ತಿ ಜಾಗ್ರದಲ್ಲಿ [ಕಂಡರೆ] ಹೊದ್ದೇರಿದ ಪಾಪಹೋಗುವುದು ಕಾಣಾ.ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕುಲವೆಣ್ಣ ಬಿಟ್ಟು ಬೆಲೆವೆಣ್ಣಿಗೆ ಮನವನಿಟ್ಟಆ ಹೊಲೆಯನ ತಲೆಯೆತ್ತಿ ನೋಡದಿರಾ ಮನವೆ.ಅವ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ,ಪ್ರಸಾದದ್ರೋಹಿ, ಶಿವದ್ರೋಹಿ.ಅವ ಪಂಚಮಹಾಪಾತಕಿ ಪಾಷಂಡಿ.ಅವನ ಮುಖವ ನೋಡಲಾಗದು ಕಾಣಾಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕೆರೆಯನೊಡೆದ ಬಳಿಕ ತೂಬು ತಡೆಯಬಲ್ಲುದೆ ?ಒಡಕ ಮಡಕೆಗೆ ಒತ್ತಿ ಮಣ್ಣ ಕೊಟ್ಟರೆ ನಿಲ್ಲಬಲ್ಲುದೆ ?ಮುತ್ತೊಡೆದರೆ ಬೆಚ್ಚಬಲ್ಲುದೆ ?ಚಿತ್ತ ಒಡೆದರೆ ಭಕ್ತಿ ಬೀಸರವಲ್ಲದೆ ಮುಕ್ತಿಯೆಲ್ಲಿಯದೊ ?ಕತ್ತೆಯ ಸೂಳೆಯ ಮಕ್ಕಳಿರಾ ಸತ್ತಹಾಗೆ ಸುಮ್ಮನಿರಿರೊಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕಾಳಗದೊಳು ಜೆಡೆದಲೆಗೆ ಮುಡಿದಲೆಯಕೊಟ್ಟ.ಭಾಳಾಂಬಕನ ಪಾದವ ಕಂಡು ಚೋಳರಾಯ,ಏಳುನೂರುಯೆಪ್ಪತ್ತೇಳು ಚಿನ್ನದ ಹರಿವಾಣದಲ್ಲಿಮೇಳೈಸಿ ಪಂಚಪಾಯಸ ಪಂಚಕಜ್ಜಾಯಪರಿಪರಿ ಪದಾರ್ಥ ಭಕ್ಷ್ಯನ್ನವನೆಡೆ ಮಾಡಿಘೃತವ ನೀಡಿ ಕಣ್ಣುತುಂಬಿ ನೋಡಿಹಮ್ಮನಾಡಿದರೆ ಅವನ ಜರದುಮಾದಾರ ಚೆನ್ನಯ್ಯನಲ್ಲಿಗೆ ಹೋಗಿಜುರುಜುರುತ ಅಂಬಲಿ ಸೊಂಡಿಲಿಕ್ಕೆನೆಸುರುಕು ಸುರುಕು ಸುರುಕೆನೆ ಸುರಿದುಅಮೃತಕ್ಕೆ ಸರಿಯೆಂದು ಪರಿಶಿವನೊಲಿದುಕೊಂಡಾಡಿದಮಾದಾರ ಚೆನ್ನಯ್ಯಂಗೆ ಶರಣು ಶರಣಾರ್ಥಿಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕೆರೆ ತೊರೆಯ ಮುಳುಗುವಅರೆಮರುಳುಗಳು ನೀವು ಕೇಳಿರೊ.ತೊರೆಯಿರೊ ಗುರುಲಿಂಗ ಜಂಗಮದ ನಿಂದ್ಯವ.ತೊರೆಯಿರೊ ಕೊಲೆ ಹುಸಿ ಕಳವು ಪಾರದ್ವಾರ ಅತಿಕಾಂಕ್ಷವ.ತೊರೆಯಿರೊ ಅಷ್ಟಮದ ಅರಿಷಡ್ವರ್ಗವ.ಇವ ತೊರೆಯದೆ ಕೆರೆ ತೊರೆಯ ಮುಳುಗುವಬರಿ ಮೂಕೊರೆಯರಿಗೆ ಭಕ್ತಿ ಮುಕ್ತಿಯೆಲ್ಲಿಯದೊ ? ಇಲ್ಲ,ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
ಕೊರಡು ಕೊನರಬಲ್ಲುದೆ ?ಬರಡು ಹಯನಾಗಬಲ್ಲುದೆ ?ಕುರುಡಗೆ ಕನ್ನಡಿಯ ತೋರಿಸಿದರೆ ನೋಡಬಲ್ಲನೆ ?ಮೂಕಂಗೆ ರಾಗವು ಹೊಳೆದರೆ ಹಾಡಬಲ್ಲನೆ ?ಹೆಗ್ಗ ಬುದ್ಧಿಯ ಬಲ್ಲನೆ ?ಲೋಗರಿಗೆ ಉಪದೇಶವ ಕೊಟ್ಟರೆ ಶಿವಭಕ್ತರಾಗಬಲ್ಲರೆ ?ಶಿವಸತ್ಪದಸಂಪನ್ನರಾಗಲಲ್ಲದೆಶಿವಾಚಾರ ಆಳವಡದು ನೋಡಾ,ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.