ಸದಾವರ್ತೆಯಕೊಡುವ ಸದಾವರ್ತಿಗಳು ನೀವು ಕೇಳಿರೊ. ಉದಯಾಸ್ತಮಾನದೊಳು ಬಂದವರ ಸದನದ ಮುಂದೆ ನಿಲಿಸಿಕೊಂಡು ಹದವಿಗೆ ಹಾಕಿ ಮಾಡುವ ಮಾಟ ಸದಾವರ್ತೆಯೆ ? ಅಲ್ಲ. ಇದು ಕಾರಣ ಬಂದ ಬರವ ನಿಂದ ನಿಲುಕಡೆಯನರಿತು ಮಾಡುವುದೆ ಸದಾವರ್ತೆ. ಇಂತಲ್ಲದಿದ್ದರೆ ಅದು ಸದಾವರ್ತೆಯಲ್ಲ. ಅವನ ಮನೆಯ ಅನ್ನ ಸೆದೆ ಸೊಪ್ಪು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.