ಉದಯದಲೆದ್ದು ಗಡಗಡನೆ ನಡುಗುತ ಹೋಗಿ
ಹೂ ಗಿಡು ಪತ್ರೆಯ ಕಡಿವ ದೃಢಗೇಡಿಗಳು ನೀವು ಕೇಳಿರೊ.
ಅದು ಕಡುಪಾಪವಲ್ಲವೆ ನಿಮಗೆ ?
ನಡುಗಿರೊ ಪರಧನ ಪರಸ್ತ್ರೀಯರಿಗೆ.
ನಡುಗಿರೊ ಕೊಲೆ ಹುಸಿ ಕಳವು ಪಾರದ್ವಾರ ಅತಿಕಾಂಕ್ಷಕ್ಕೆ.
ನಡುಗಿರೊ ಹರನಿಂದ್ಯ ಗುರುನಿಂದ್ಯ ಅನಾಚಾರಕ್ಕೆ,
ಇದಕ್ಕೆ ನಡುಗದೆ ಮಳಿ ಛಳಿ ಗಾಳಿಗೆ ನಡುಗಿ
ಹೂ ಗಿಡ ಪತ್ರೆಯ ಕಡಿವ ಕಡುಪಾಪಿಗಳಿಗೆ
ನಿಮಗೆ ಮೃಡಪೂಜೆಯೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.