ಅಥವಾ
(4) (2) (2) (0) (4) (1) (0) (0) (1) (0) (0) (5) (0) (0) ಅಂ (1) ಅಃ (1) (14) (0) (10) (0) (0) (4) (0) (2) (0) (0) (0) (0) (0) (0) (0) (5) (0) (1) (2) (3) (8) (0) (1) (4) (7) (0) (1) (0) (1) (0) (5) (0) (5) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಹಿರಿಯರ ಪಾದಸೇವೆಯ ನೆರೆ ಮಾಡುವ ಪರಿಯ ಕೇಳಿರೊ ಭಕ್ತರು. ಮಾಡಿ ನೀಡುವಲ್ಲಿ ಸೊರಗಿ ಸೊಕ್ಕಿ ಕೆಕ್ಕಸಗೆಲವುತ್ತ ಮಾಡಲಾಗದು. ಸಲೆ ಪಂಕ್ತಿಯಲ್ಲಿ ಸಂಚು ವಂಚನೆ ಸನ್ನೆ ಸಟೆ ಮೈಸಂಜ್ಞೆಯಲುಂಬುದ ಬಿಟ್ಟು ಪನ್ನಗಧರನ ಶರಣರಿಗೆ ಬಿನ್ನಹವಮಾಡಿ ಬಿಜಯಂಗೆಯಿಸಿ ತಂದು ಪರಮಾನ್ನ ಪರಿಮಳದಗ್ಘಣಿಯ ನೀಡುವ ಭಕ್ತರಿಗೆ ಮುಕ್ತಿ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರುವೆ ಪರಮೇಶ್ವರನೆಂದು ಭಾವಿಸಬೇಕು ನೋಡಾ. ಎರಡೆಂದು ಪ್ರಕೃತಿಯ ತೋರಿದರೆ ಅದು ಅಜ್ಞಾನ ನೋಡಾ. ಇದು ಕಾರಣ, ಆವನಾನೋರ್ವನು ಎರಡೆಂದು ಭಾವಿಸಿದಡೆ ಅವನಿಗೆ ಅನೇಕಕಾಲ ನರಕದ ಕುಳಿಯೊಳಗೆಯಿಪ್ಪುದು ತಪ್ಪದು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರುವು ಉಂಡು ಉಟ್ಟನು, ಇಟ್ಟು ತೊಟ್ಟನು, ಕೊಟ್ಟು ಕೊಂಡಾಡುತಾನೆಂದು ಹೊಟ್ಟೆಯ ಹೊಟ್ಟೆಯ ಹೊಸಕೊಂಬ ಕೆಟ್ಟ ಹೊಲೆಯರ ಮನೆಯ ಅನ್ನ ಸುಟ್ಟ ಸುಡುಗಾಡೊಳಗಣ ಅರೆವೆಣ ಕೊರೆವೆಣನೆಂದು ಮುಟ್ಟರು ಗುರುಪಾದನಿಷ್ಠೆವುಳ್ಳವರು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರುಹಿರಿಯರ ದರುಶನ ಸ್ಪರುಷನದಲ್ಲಿ ಇರುವ ಕಟ್ಟಳೆಯ ಕೇಳಿರೊ. ಭಕ್ತರು ಆಡದ ಆಚಾರ ಗಂಟುಹಾಕಲಾಗದು. ಗಡ್ಡ ಮೀಸೆಯ ತಿದ್ದಲಾಗದು. ಮಡ್ಡಮಾತು ಗೀತವನಾಡಲಾಗದು. ಅಥವ ಆಡಿದರೆ ಅವರ ಸಿರದ ಗುಡ್ಡದ ಬೋಳರ ಸಮಾನವೆಂದು ಕಂಡು ಸಡ್ಡೆಮಾಡದೆ ಇರುವರು ಸತ್ಪುರುಷರು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರೂಪದೇಶವ ಪಡೆದು ಗುರುಪುತ್ರನೆನಿಸಿಕೊಂಡ ಬಳಿಕ ಹಿಂದಣ ತಾಯಿ ತಂದೆ ಬಂಧು ಬಳಗವ ನೆನೆಯದಿರಿರೋ. ಕುಲಗೆಟ್ಟ ಹೊಲೆಯರಿರ ನೆನೆದರೆ ನಿಮಗೆ ಶಿವದ್ರೋಹ ತಪ್ಪದು. ನಿಮಗೆ ತಂದೆ ತಾಯಿ ಬಂಧು ಬಳಗವ ಹೇಳಿಹೆನು ಕೇಳಿರೊ. 'ಗುರುದೈವಾತ್ ಪರಂ ನಾಸ್ತಿ' ಎಂದುದಾಗಿ, ಗುರುವೇ ತಾಯಿ, ಗುರುವೇ ತಂದೆ, ಗುರುವೇ ಬಂಧುಬಳಗವೆಂದು ನಂಬಬಲ್ಲಡೆ ಆತನೆ ಶಿಷ್ಯನೆಂಬೆ, ಆತನೆ ಭಕ್ತನೆಂಬೆ. ಅಲ್ಲದಿರ್ದಡೆ ಭವಿಯೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರು ಬಡವನೆಂದು ಶಿರ ಮಣಿಯದು. ತಲೆವಾಗದ ನೆರೆ ಪರವಾದಿ ಪಾತಕರ ಮನೆಯ ಅನ್ನ ಸುರೆಯ ಮಾಂಸದ ಸಮಾನವೆಂದು ಜರೆವರು ಗುರುಹಿರಿಯರು. ಪರಶಿವ ನಿಮಗೊಲಿಯ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರುವಿನಲ್ಲಿ ಕುಲ ವಿದ್ಯೆ ಗುಣ ಅವಗುಣವ ನೋಡುವವ ಒಂದನೆಯ ಪಾತಕ. ತೀರ್ಥಲಿಂಗದ ನಿಜನಿಲುಕಡೆ ನಿತ್ಯ ಅನಿತ್ಯವ ನೋಡುವವ ಎರಡನೆಯ ಪಾತಕ. ತೀರ್ಥದಲ್ಲಿ ತಿಳಿ ಕಲಕ ನೋಡುವವ ಮೂರನೆಯ ಪಾತಕ. ಪ್ರಸಾದದಲ್ಲಿ ರುಚಿಯರುಚಿಯ ನೋಡುವವ ನಾಲ್ಕನೆಯ ಪಾತಕ. ಜಂಗಮದಲ್ಲಿ ಜಾತಿ -ಅಜಾತಿಯ ನೋಡುವವ ಪಂಚಮಹಾಪಾತಕರುಗಳು ಕುಂಭೀಮಯ ನರಕದಲ್ಲಿ ಕುಲಕೋಟಿ ಬೀಳುವರು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರುಕೊಟ್ಟ ಕುರುಹ ಬಿಟ್ಟು ನರರು ನಟ್ಟಕಲ್ಲಿಂಗೆ, ಒಟ್ಟಿದ ಮಣ್ಣಿಂಗೆ ನಿಷೆ*ವೆರದು ನುಡಿವ ಭ್ರಷ* ಕನಿಷ* ಕರ್ಮಿಗಳ ಮುಖವ ನೋಡಲಾಗದು. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರುಮುಖದಲ್ಲಿ ಕೊಂಬುದು ಗುರುಪ್ರಸಾದ. ಲಿಂಗಮುಖದಲ್ಲಿ ಕೊಂಬುದು ನಿತ್ಯಪ್ರಸಾದ. ಜಂಗಮಮುಖದಲ್ಲಿ ಕೊಂಬುದು ಜ್ಞಾನಪ್ರಸಾದ. ಜ್ಞಾನಮುಖದಲ್ಲಿ ಕೊಂಬುದು ಸಿದ್ಧಪ್ರಸಾದ. ಇಂತೀ ಪ್ರಸಾದ ನಾಲ್ಕು ಸ್ಥಿರನಲ್ಲದೆ ಭ್ರಾಂತುಗೊಂಡ ಬ್ರಹ್ಮರಾಕ್ಷಸನಂತೆ ಉಂಡುಂಡುಳುಹಿಬಿಟ್ಟು ಹೋಗುವ ಭಂಡರ ಭಕ್ತಿಯ ಯಮಗುಂಡದೊಳಗಿಕ್ಕುವೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗಂಡನಿಂದ ಹೆಂಡತಿ ಮೊದಲು ಹುಟ್ಟಿದಳು, ಆ ಗಂಡನಿಂದ ಕಿರಿಯಳಲ್ಲದೆ ಹಿರಿಯಳಲ್ಲವಯ್ಯ. ಗುರುವಿನಿಂದ ಈ ಶಿಷ್ಯ ಅರಿವುಳ್ಳವನಾದರೆ ಭೃತ್ಯನಲ್ಲದೆ ಕರ್ತನಲ್ಲವಯ್ಯ. ಕುದುರೆಯ ಹಿಡಿವಂತ ಡಾಣಕ ರಾವುತಿಕೆಯ ಮಾಡಿದರೊಪ್ಪುವರೆ ? ಆಳಾಗಿದ್ದವನು ಅರಸಾಗಿದ್ದರೊಪ್ಪುವರೆ ? ತಂದೆಗೆ ಮಗ ದೊಡ್ಡವನಾಗಬಲ್ಲನೆ ? ಇದು ಕಾರಣ ಶಿಷ್ಯರಿಗೆ ಭಯಭಕ್ತಿ ಕಿಂಕುರ್ವಾಣವಿರಬೇಕು. ಇಲ್ಲದಿರ್ದಡೆ ಅವ ಶಿಷ್ಯನಲ್ಲ, ಶಿವಭಕ್ತನಲ್ಲ. ಅವ ಭವಿಯೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ