ಶಿವಭಕ್ತಿರಿಗೆ ಭವಿ ಸರಿಯೆಂಬ ಭ್ರಷ್ಟ ಭಂಡರು ನೀವು ಕೇಳಿರೊ.
ಅದೇನು ಕಾರಣವೆಂದರೆ ಕತ್ತೆಗೆ ಕುದುರೆ ಸರಿಯೆ ?
ಗರತಿಗೆ ತೊತ್ತು ಸರಿಯೆ ? ಭಿತ್ತಿಗೆ ಕೇರು ಸರಿಯೆ ?
ವಿರಕ್ತಿಗೆ ಪಿರಿತಿ ಸರಿಯೆ ? ಕತ್ತಲೆಗೆ ಬೆಳಗು ಸರಿಯೆ ?
ಕರ್ತಗೆ ಭೃತ್ಯ ಸರಿಯೆಂಬ ದುರುಕ್ತಿಯ ದುರಾಚಾರಿ
ದೂಷಕ ಹೊಲೆಯರಿಗೆ ಭಕ್ತಿ ಮುಕ್ತಿಯೆಲ್ಲಿಯದೊ ?
ವಿರಕ್ತಿ ವೀರಶೈವ ವಿಚಾರ ಅವನಿಗೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.