ಉದಕ ನಾನಾ ವರ್ಣದ ರೂಪಿನಲ್ಲಿ ಬೆರಸಿ
ಅವರ ಛಾಯಕ್ಕೆ ಭಿನ್ನಭಾವವಿಲ್ಲದೆ,
ಆ ರೂಪಿಂಗೆ ತಾ ದ್ರವವೊಡಲಾಗಿ ತೋರುವಂತೆ
ಎನ್ನ ಸರ್ವಾಂಗದಲ್ಲಿ ತೋರುವ ಕೋರಿಕೆ ನೀನಾಗಿ,
ಮುಕುರವ ನೋಡುವ ನೋಟದಂತೆ ಒಳಗೆ ತೋರುವ ಇರವು,
ಹೊರಗಳವನ ಪ್ರತಿರೂಪಿನಂತೆ
ಎಲ್ಲಿಯೂ ನೀನಾಗಿ ನಾನರಿದು ಮರೆವುದಕ್ಕೆ ತೆರಪಿಲ್ಲ.
ಹಾಗೆಂದಲ್ಲಿಯೆ ನಿನ್ನ ಉಳುಮೆ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.