ಧರೆ ಸಿರಿ ಉರಿ ಮೂರು ಕೂಡಿ ಉರಿವುತ್ತದೆ.
ಆ ಉರಿಯ ನಡುವೆ ಮಲಯಜ ಹುಟ್ಟಿತ್ತು.
ಮಲಯಜದ ಗಂಧ ತಾಗಿ ಮೂವರ ಬಲೋತ್ರ ನಂದಿತ್ತು.
ಅವು ನಂದುವಾಗ ನಾ ನಿಂದಿರಲಾಗಿ
ಆ ರಾಹು ತಾಗಿ ಎನ್ನಯ ಕಾಯದ ರೂಪು ಬಯಲಾಗದಿದೆ
ಎಂದೆನುತ್ತ ಚಿಹ್ನದೋರುತ್ತದೆ.
ತೋರಿ ಅಡಗಬೇಡ, ಅಡಗಿದಡೆ ನಾ ಬಿಡೆ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.