ಭ ಪದದಿಂದ ಪ್ರಾರಂಭವಾಗುವ ವಚನಗಳು:
ಭಾವಭಾವಿಸಿದಲ್ಲಿ, ಜೀವ ಸಂಚರಿಸುವಲ್ಲಿ,ಜ್ಞಾನ ಪರಮನೆಂದು ಅರಿದಲ್ಲಿ,ಬೇರೊಂದು ಬೀಜವುಂಟೆ ?ನಾನಾರೆಂಬುದ ತಾನರಿದ ಮತ್ತೆ,ನಿರ್ವೀಜವಾಗಿ ಮನಸಂದಿತ್ತು ಮಾರೇಶ್ವರಾ.
ಭಕ್ತಂಗೆ ಪ್ರತ್ಯುತ್ತರ ಘಟಿಸಿದಾಗ,ಮತ್ಸರಕ್ಕೊಡಲಾಗಲಾಗಿ, ಸತ್ಯ ಜಾರಿತ್ತು.ನಿತ್ಯ ಕಾಲಂಗಳಲ್ಲಿಅರ್ಚನೆ ಪೂಜೆ ಸತ್ತಿತ್ತು.ಹುಸಿ ಕುಹಕವೆಂಬ ಭಾವಚಿತ್ತದಲ್ಲಿ ತೋರಿದಾಗವೆತೋರುವ ತೋರಿಕೆಗೆ ಮುನ್ನವೆಮನಸಂದಿತ್ತು ಮಾರೇಶ್ವರಾ.
ಭಟಂಗೆ ಭಾಷೆಯಲ್ಲದೆ, ಅಂಜಿ ತೊಲಗಿದವಂಗೆಚೌಭಟದ ರಣರಂಗವುಂಟೆ ?ವಾಗದ್ವೈತಿ ಸ್ವಯಾನುಭಾವಕ್ಕೆ ಸಂಬಂಧಿಯಪ್ಪನೆ ?ಕೀಟಕ ಅರುಣನ ಕಿರಣವ ಜರೆದಂತೆ,ದೂಷಣವ ಮಾಡುವಲ್ಲಿ, ಆ ದೂಷಣಕ್ಕೆ ತಾನೊಳಗಹಲ್ಲಿ,ತಿಳಿದು ವಿಚಾರಿಸುವಲ್ಲಿ, ಒಳಹೊರಗುಯೆಂಬುದಕ್ಕೆ ಮುನ್ನವೆಮನಸಂದಿತ್ತು ಮಾರೇಶ್ವರಾ.
ಭಕ್ತರು ನಾವೆಂದು ನಿತ್ಯನೇಮವ ಮಾಡಿಕೊಂಡೆವೆಂದುಮನೆಮನೆಯ ಬಾಗಿಲ ತಪ್ಪಲ ಕಾಯಲೇತಕ್ಕೆ ?ಇದು ಶಿವಭಕ್ತರಿಗೆ ಒಪ್ಪುವುದೆ ?ಇಂತೀ ವ್ರತನೇಮವ ಮಾರಿ,ಘಟವ ಹೊರೆವ ಕುಟಿಲರಿಗಂಜಿ,ಮುನ್ನವೆ ಮನಸಂದಿತ್ತು ಮಾರೇಶ್ವರಾ.