ಕುರುವ ಹಿಡಿವರೆ ಗುರು ಕರಜಾತ. ಅರುಹಿನ ಪಿಂಡಕ್ಕೆ ಮರವೆ ಸೋಂಕುವುದೇನಯ್ಯ ? ವರಲಿಂಗ ಕರುಣದಿಂದ ವ್ಯರ್ಥವೆ ಅರ್ಥವಾಯಿತು. ಪರಮ ತೃಪ್ತ ತಾನು ತಾನಾದ ಬಳಿಕ ಪರಿಕ್ಷುಪ್ತವುಂಟೆ ? ವರಕೃಪೆಯುಳ್ಳ ವಸ್ತುವಿನ ವಚನವಂತಗೆ ಸಲ್ಲದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
ಕಲಿಕೆಯ ಮಾತಿನ ಮಾಲೆಯ ನೀಲೆ ಸೀಲೆಗೆ ನಿಲುಕದು ಸಂಗನ ಶರಣಸ್ಥಲ. ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ? ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ? ಕೊಲೆ ಆತ್ಮದಲಿ ಕೊನೆನಾಲಿಗೆಯ ಮೃದು ಕ್ರೋಧ..... ಫಲ ನಿಃಫಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.