ನಾನು ಭಕ್ತ , ನಾನು ಮಹೇಶ್ವರ,
ನಾನು ಪ್ರಸಾದಿ, ನಾನು ಪ್ರಾಣಲಿಂಗಿ,
ನಾನು ಶರಣ, ನಾನು ಐಕ್ಯನೆಂಬುದು ಅಜ್ಞಾನವಾಕ್ಯ.
ವಾನರ ವನದೊಳಗಿದ್ದರೆ ಹನುಮನೆನಬಹುದೆ ?
ಶ್ವಾನ ಬೂದಿಯೊಳು ಹೊರಳಿದರೆ ಭಸ್ಮಾಂಗಿಯಹುದೆ ?
ಮಾನವರೆಲ್ಲ ಭಕ್ತರಾಪರೆ ?
ಮರನೆಲ್ಲ ಗಂಧ ಚಂದನವಾಪುದೆ ?
ಬಾನದ ಕುರುಳ ಸುಟ್ಟ ಬೂದಿಯಲ್ಲಿ ಭಸಿತವಾಪುದೆ ?
ನಾನು ನೀನುಯೆಂಬ ವಂತಿನ ಸಂತೆಗೆ ಜ್ಞಾನವಳವಡದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.