ಜಂಗಮಕೆ ಜನನ ಮರಣವುಂಟೆ ?
ಸಂಗಯ್ಯ ಸಂಗದೋಷವು.
ನಾನು ಎಂದ ಕಾರಣದಿಂದ ನರಕಪ್ರಾಪ್ತಿ.
ಭೃಂಗ ಪುಷ್ಪದ ಕುಸುಮಕ್ಕೆರಗುವುದಲ್ಲದೆ
ಕೇಸರಿಗೆರಗುವುದೆ ?
ಬಂಗಾರ ಮಣ್ಣಿಂದ ಪುಟ್ಟಿತ್ತು
ಮಣ್ಣ ಕೂಡುವುದೆ ?
ಹಿಂಗಡಿಸಬಹುದೆ ತ್ರಿವಿಧವ ?
ವಿಷ ಪಾತಕವ ಶೃಂಗಾರಕ್ಕೆ ಕಟ್ಟಿಬಿಡುವ
ಸಂಬಂಧಿಗಳಿಗೆ ಕಷ್ಟವೆಯಟ್ಟಿತು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.