ಗುರು ತೀರ್ಥಪ್ರಸಾದ ಅರುಹಿನಘಟ್ಟಿ
ದೊರಕೊಂಬುದೆ ನರಕೀಲಕರಿಗೆ
ಬರಿಯ ಮಾತಿನಮಾಲೆ ಕೊಳುಕೊಡೆಯಲ್ಲವು.
ಕರವೆತ್ತಿ ಕೊಟ್ಟಾತ ಗುರುವಲ್ಲ ; ಕೊಂಡಾತ ಶಿಷ್ಯನಲ್ಲ.
ನಿರುತ ನಿಜಗೊಹೇಶ್ವರನಲ್ಲಿ
ಬೆರದು ಕೊಂಬುದು ತೀರ್ಥ;
ಅರಿತು ಕೊಂಬುದು ಪ್ರಸಾದ.
ಮರೆಯಿದು ಮಾಟ, ಮತ್ರ್ಯದ ಕೂಟ, ಮತಿಗೆ ಬೇಟ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.