ಚತುರ್ವೇದಿಗಳಾದ ಶತಕೋಟಿ ಬ್ರಾಹ್ಮಣರಿಗೆ
ನಿತ್ಯ ಭೋಜನ ಮಾಡಿಸಿದ ಫಲವು,
ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ !
ಸಪ್ತಕೋಟಿ ಕೆರೆಯ ಕಟ್ಟಿಸಿದ ಫಲವು,
ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ !
ಅಶ್ವಯಜ್ಞಂಗಳ ಸಹಸ್ರಕೋಟಿ ಮಾಡಿದ ಫಲವು,
ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ !
ಅದೆಂತೆಂದೊಡೆ :
``ಶತಕೋಟಿ ವೇದವಿಪ್ರಾಣಾಂ ತಟಾಕ ಸಪ್ತಕೋಟಿನಾಮ್ |
ವಾಜಿಕೋಟಿ ಸಹಸ್ರಾಣಾಮೇಕಭಿಕ್ಷಾ ಸಮರ್ಪಣಮ್||''
ಎಂದುದಾಗಿ,
ನಮ್ಮ ಅಖಂಡೇಶ್ವರಸ್ವರೂಪವಾದ ನಿಜಜಂಗಮಕ್ಕೆ ನೀಡಿದ ಫಲಕ್ಕೆ
ಇನ್ನಾವ ಫಲವು ಸರಿಯಿಲ್ಲ ನೋಡಿರೊ !