ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಂಗಮದ ಪ್ರಸಾದವ ಲಿಂಗಕ್ಕೆ ಕೊಡಬಾರದೆಂಬ ಕರ್ಮಿಯ ಮಾತ ಕೇಳಲಾಗದು. ಅದೆಂತೆಂದಡೆ : ಅದು ಪವಿತ್ರವಾದ ಕಾರಣ ಪವಿತ್ರವೆನಿಸುವ ಮೂರ್ತಿ ಮಹಾಜಂಗಮದ ಪಾದತೀರ್ಥ ಪ್ರಸಾದವ ಲಿಂಗಕ್ಕೆ ಸಮರ್ಪಿಸಿ ಪ್ರಸಾದಭೋಗೋಪಭೋಗಿಯಾಗಿರ್ಪ ಭಕ್ತನೆ ಬಸವಣ್ಣ. ಅದಲ್ಲದೆ ಅಪವಿತ್ರವ ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ-ಸಾಕ್ಷಿ: ಜಂಗಮಂ ಚ ಪ್ರಸಾದಂತು ನಿವೇದ್ಯಂ ಚ ಸಮರ್ಪಣಂ | ಪ್ರಸಾದಿ ಸತ್ಯ ಶುದ್ಧಾತ್ಮ ಪ್ರಸಾದಿಸ್ಥಲಮುತ್ತಮಂ || ಇಂತಲ್ಲದೆ ಅಪವಿತ್ರದ್ರವ್ಯವ, ಉಚ್ಫಿಷ್ಟ ಚಾಂಡಾಲ ಕಾಯವ ಮುಟ್ಟಿ ಪವಿತ್ರಲಿಂಗಕ್ಕೆ ಅರ್ಪಿಸಿ ಭುಂಜಿಸುವ ಚಾಂಡಾಲನ ಮುಖವ ನೋಡಲಾಗದು, ರೇಕಣ್ಣಪ್ರಿಯ ನಾಗಿನಾಥಾ
--------------
ಬಹುರೂಪಿ ಚೌಡಯ್ಯ
ಜಂಗಮದನುವನರಿಯದಿರ್ದಡೆ ಲಿಂಗ ತಮತಮಗೆಲ್ಲಿಯದೊ ? ಲಿಂಗವಿಪ್ಪ ಸಜ್ಜೆಯೆಲ್ಲಾ ಜಂಗಮದ ಪ್ರಾಣವಲ್ಲವೆ ? ಲಿಂಗವು ರೇಕಣ್ಣಪ್ರಿಯ ನಾಗಿನಾಥ ಜಂಗಮದ ಕಾಯವ ತೊಟ್ಟುಕೊಂಡು ಸುಳಿವನಾಗಿ.
--------------
ಬಹುರೂಪಿ ಚೌಡಯ್ಯ
ಜಂಗಮದ ಪಾದತೀರ್ಥ ಪ್ರಸಾದವ ಕೊಳ್ಳದಂತಹ ಗುರುವಿನ ಕೈಯಲ್ಲಿ ಲಿಂಗಧಾರಣವ ಮಾಡಿಸಿಕೊಳಲಾಗದು. ಆತನ ಪಾದತೀರ್ಥ ಪ್ರಸಾದವ ಕೊಳಲಾಗದು. ಅಥವಾ ಪ್ರಮಾದವಶದಿಂದ ಲಿಂಗಧಾರಣವ ಮಾಡಿಸಿಕೊಂಡಡೆಯೂ ಮಾಡಿಸಿಕೊಳ್ಳಲಿ. ಆ ಗುರುವನೆ, ಜಂಗಮದ ಪಾದತೀರ್ಥ ಪ್ರಸಾದವ ಕೊಂಬ ಹಾಂಗೆ ಸದಾಚಾರಿಯ ಮಾಡುವದು. ಶಿಷ್ಯನು, ಆ ಗುರು ಜಂಗಮದ ಪಾದತೀರ್ಥ ಪ್ರಸಾದವ ಕೊಳ್ಳದಿರ್ದಡೆ ಮತ್ತೆ ಲಿಂಗವನು ಮರಳಿ ಜಂಗಮದ ಪಾದತೀರ್ಥ ಪ್ರಸಾದವ ಕೊಂಬಂತಹ ಜಂಗಮದ ಕೈಯಲ್ಲಿ ಕೊಟ್ಟು ಕೊಳಬೇಕು. ಜಂಗಮಲಿಂಗಪ್ರಸಾದವ ಕೊಳದಂತಹ ಜಂಗಮದ ಕೈಯಲ್ಲಿ ಪ್ರಸಾದವ ಕೊಳಲಾಗದು. ಆ ಜಂಗಮ ಭಕ್ತನ ಮಠಕ್ಕೆ ಬಂದು ಪಾದತೀರ್ಥ ಪ್ರಸಾದವ ಕೊಳದಂತಹ ಜಂಗಮವಾದಡೂ ಅವರಲ್ಲಿ ಪಾದತೀರ್ಥ ಪ್ರಸಾದವ ಕೊಳಲಾಗದು. ಅದೇನು ಕಾರಣವೆಂದಡೆ : ಜಂಗಮದ ಪಾದತೀರ್ಥ ಪ್ರಸಾದವ ಕೊಳದಂತಹ ಗುರುವಿಂಗೆಯೂ ಲಿಂಗಕ್ಕೆಯೂ ಜಂಗಮಕ್ಕೆಯೂ ಮುಕ್ತಿಯಿಲ್ಲ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ
ಜಂಗಮಪ್ರಸಾದವರಿಯದ ಗುರುವಿನ ಕೈಯಲ್ಲಿ ಲಿಂಗಸಾಹಿತ್ಯವಾಗಲಾಗದಯ್ಯಾ. ಆದಡೆ ಆಗಲಿ, ಗುರುವನೆ ಸದಾಚಾರಿಯ ಮಾಡೂದು. ಶಿಕ್ಷಾಗುರು ಜಂಗಮದಲ್ಲಿ ಪ್ರಸಾದವ ಕೊಂಡೆಹೆನೆಂದಡೆ ಆ ಜಂಗಮ ಜಂಗಮಪ್ರಸಾದಿಯಲ್ಲದಿರ್ದಡೆ ಆ ಪ್ರಸಾದವ ಮುಟ್ಟಲಾಗದು. ರೇಕಣ್ಣಪ್ರಿಯ ನಾಗಿನಾಥಲಿಂಗವು ಆಗುಹೋಗನರಿಯನಾಗಿ ಬಸವಣ್ಣನ ಕೂಡಿ ಆಡಿ ಪ್ರಸಾದಿಯಾದನಾಗಿ ಇತ್ತ ಬಾ ಎಂದು ಕೈವಿಡಿದು ತೆಗೆದುಕೊಂಬುದು.
--------------
ಬಹುರೂಪಿ ಚೌಡಯ್ಯ