ಎಲ್ಲಾ ದೈವಕ್ಕೆ ವಿಷ್ಣು ಘನವೆಂಬ ವೇದಾದಿಗಳು
ನೀವು ಕೇಳಿ.
ಎಲ್ಲಾ ದೈವಕ್ಕೆ ಸರಿಯೆಂಬ ಮಾಯಾವಾದಿಗಳು
ನೀವು ಕೇಳಿ.
ಗಾಯತ್ರಿ ಛಂದ, ವಿಶ್ವಾಮಿತ್ರ ಋಷಿ, ಸವಿತಾ ದೇವ,
ಅಗ್ನಿ ಮುಖ, ಬ್ರಹ್ಮ ಶಿರ, ವಿಷ್ಣು ಹೃದಯ, ರುದ್ರ ಲಲಾಟವೆಂದು
ಹೀಂಗೆ ಹೇಳುತ್ತಿದೆ [ಶ್ರುತಿ].
ಗಾಯತ್ರಿ ಕಲ್ಪದಲ್ಲಿ :
ಒಂ ಭೂಃ ಒಂ ಭುವಃ ಒಂ ಸುವಃ ತತ್ಸ ವಿತುರ್ವರೇಣ್ಯಂ |
ಭರ್ಗೋ ದೇವಸ್ಯ ಧೀಮಹಿಯೋ ಯೋನಃ ಪ್ರಚೋದಯಾತ್ ||
ಎಂದುದು ಶ್ರುತಿ.
ಸರ್ವದೇವ ಶಿಖಾಮಣಿ ಸೊಡ್ಡಳನಲ್ಲದೆ ದೈವವಿಲ್ಲೆಂದುದು.