ಏಕಮೇವ ನ ದ್ವಿತೀಯಂ ಬ್ರಹ್ಮವೆಂಬ
ಘನಮಹಿಮನ ಕಂಡ ಕಾಣಿಕೆಯಲ್ಲಿ,
ತನುಮನ ಕರಗಿ, ಕರಣಂಗಳೆಲ್ಲ ತರಹರವಾದವಯ್ಯಾ.
ದೀರ್ಘದಂಡ ನಮಸ್ಕಾರಂ ನಿರ್ಲಜ್ಜಂ ಗುರುಸನ್ನಿಧೌ |
ಶರೀರಮರ್ಥಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್ ||
ಎಂದುದಾಗಿ, ಶರಣುವೊಕ್ಕೆ ನಾನು.
ಎನ್ನ ಶಿರ ನಿಮ್ಮ ಚರಣದಲ್ಲಿ ಬಿಡಿಸಬಾರದ ಸಂಗ.
ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರ ಕಂಡು,
ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತಯ್ಯಾ.