ಎಂಬತ್ತನಾಲ್ಕುಲಕ್ಷಕೋಟಿ ಮಾರಿನಲ್ಲಿ ಮಾರಿಸಿಕೊಂಡ ಶರೀರ ಇದ ತಂದವರಾರಣ್ಣಾ. ಕಾಯಕ್ಕೆ ಜೀವ ಸುಂಕವ ಕೊಡದೆ, ಕಾಯದೊಳಗಣ ಬಂದ ಭಾವಭ್ರಮೆ ಸುಂಕ. ಈ ವಿಧದ ಚೀಟ, ಬಂಕೇಶ್ವರಲಿಂಗದಲ್ಲಿ ಒಪ್ಪಿಸಿಕೊಳ್ಳಿರಣ್ಣಾ.
ಎಲ್ಲರ ಸುಂಕ, ಎತ್ತು ತೊತ್ತು ಬಂಡಿ ಬಲ್ಲೆತ್ತು . ಎನ್ನ ಸುಂಕ ಎಲ್ಲರ ಪರಿಯಲ್ಲ. ಕಟ್ಟಿದ ಕುರುಹಿಂಗೆ, ಹಿಡಿದ ವ್ರತನೇಮನಿತ್ಯಕ್ಕೆ ತಪ್ಪಲಿಲ್ಲಾಯೆಂದು ಕೊಟ್ಟ ಚೀಟ ಸಿಕ್ಕಿಸಿದೆ ನಿಮ್ಮಂಗದಲ್ಲಿ. ಭಕ್ತರಾಗಿ ಕಳವು ಹಾದರ ಮಿಕ್ಕಾದೊಂದೂ ಬೇಡ ಎಂದು ಕೊಟ್ಟ ಚೀಟು ವಿಶುದ್ಧಿ, ಜಗದ ಸುಂಕದೊಡೆಯ ಬಂಕೇಶ್ವರಲಿಂಗನು.