ಐಮುಕ್ತಿ ಕ್ಷೇತ್ರದ ವಾಸದ ರಜತಗಿರಿಯ ಮಧ್ಯದಲ್ಲಿ ಕುರುಕ್ಷೇತ್ರ.
ಅದರೊಳಗಿಬ್ಬರು ದೊರೆಗಳು ಅರಿರಿಪುಗಳಾದರು.
ಅವರ ಹೆಸರು ಕಳಾಂಧರ ಕಮ್ಮಟಹತ.
ಅಸುಗತನೆಂಬವ ಬೇರೊಬ್ಬನರಸು ರಿಪು.
ಕುಲತಮನಾಶಗತಿ ಮಂಡಲವಿರಹಿತ ರಾಜಕುಲ ಅಸುನಾಥ.
ಇವರಿಬ್ಬರು ಮಸಕಲಿಕೆ ಮೊನೆಯಾಯಿತ್ತು.
ಅಸುಭಟರೆಲ್ಲರು ಹುಸಿಭಟರಾದರು,
ಬಂಕೇಶ್ವರಲಿಂಗವ ಅಹುದಲ್ಲವೆಂದ ಕಾರಣ.