ದಬ್ಬಳ ಧರೆಯ ಚುಚ್ಚಲಾರದೆ,
ಹಾಗ ಮುಳ್ಳು ಮೂರುಲೋಕವ ಚುಚ್ಚಿತ್ತು.
ರಟ್ಟೆ ಬಲಿದ ಹಕ್ಕಿ ಹಾರಲಾರದೆ,
ಆ ಕೊಂಬಿಂದ ಈ ಕೊಂಬಿನಲ್ಲಿ ಉಳಿಯಿತ್ತು.
ತುಪ್ಪುಳ ಬಾರದ ಮರಿ ಮಹದಾಕಾಶವ ಸುತ್ತಿತ್ತು.
ಹೆತ್ತವಳರಿಯದ ಮದ, ಆಗ ಹುಟ್ಟಿದ ಶಿಶು ಅರಿಯಿತ್ತು.
ತಮ್ಮವ್ವೆಗೆ ಮದ್ದ ಕೊಟ್ಟು, ತಾ ಸತ್ತಿತ್ತು, ಬಂಕೇಶ್ವರಲಿಂಗದಲ್ಲಿ.