ಘಟವೆಂಬ ಮಠದೊಳಗೆ ಮನವೆಂಬ ಮರ ಹುಟ್ಟಿತ್ತು.
ಬೇರುವರಿಯಿತ್ತು, ಅದಕ್ಕೆ ಶತಕೋಟಿಶಾಖೆ ಬಿಟ್ಟಿತ್ತು.
ಆ ಶಾಖೆಯ ಬೆಂಬಳಿಗೊಂಡು ಆಡುವರೆಲ್ಲ ಮುಂದುಗಾಣದೆ ಸಂದುಹೋದರು.
ಇದನರಿದು ನಿಮ್ಮ ಶರಣರು ಹಿಂದೆ ನೋಡಿ
ಮುಂದೆ ಲಿಂಗದಲ್ಲಿ ಬೆರೆವ ಭೇದವ ಕಂಡು,
ಮನವೆಂಬ ಮರದ ಬೇರನಗಿದು ಶತಕೋಟಿ ಶಾಖೆಯನು ಸವರಿ,
ತುತ್ತತುದಿಯ ಮೇಲೆ ನಿಂದು ನೋಡುವನ್ನಕ್ಕ,
ನಾನೆತ್ತ ಹೋದೆನೆಂದರಿಯೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.