ತನು ಕರಗಿತ್ತು, ಮನ ನಿಂದಿತ್ತು, ಉಲುಹು ಅಡಗಿತ್ತು,
ನೆಲೆ ನಿಂದಿತ್ತು, ಮನ ಪವನ ಬಿಂದು ಒಡಗೂಡಿತ್ತು,
ಉರಿ ಎದ್ದಿತ್ತು, ಊರ್ದ್ವಕ್ಕೇರಿತ್ತು, ಶರಧಿ ಬತ್ತಿತ್ತು,
ನೊರೆ ತೆರೆ ಅಡಗಿತ್ತು, ಅಷ್ಟಮದವೆಲ್ಲ ಹಿಟ್ಟುಗುಟ್ಟಿತ್ತು.
ಕರಣಂಗಳೆಲ್ಲ ಹುರಿದು ಹೋದವು, ಸಪ್ತಧಾತು ಕೆಟ್ಟಿತ್ತು,
ರಸವರತಿತ್ತು, ಅಪ್ಪುಬರತಿತ್ತು.
ಕೆಟ್ಟುಹೋದ ಬಿದಿರಿನಂತೆ ತೊಟ್ಟು ಬಿಟ್ಟು ಬಯಲೊಳಗೆ ಬಿದ್ದು,
ನಾನೆತ್ತ ಹೋದೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ