ಅ
(54)
ಆ
(20)
ಇ
(4)
ಈ
(1)
ಉ
(1)
ಊ
(1)
ಋ
(0)
ೠ
(0)
ಎ
(7)
ಏ
(4)
ಐ
(0)
ಒ
(3)
ಓ
(0)
ಔ
(0)
ಅಂ
(19)
ಅಃ
(19)
ಕ
(41)
ಖ
(2)
ಗ
(16)
ಘ
(7)
ಙ
(0)
ಚ
(8)
ಛ
(0)
ಜ
(9)
ಝ
(0)
ಞ
(0)
ಟ
(2)
ಠ
(0)
ಡ
(0)
ಢ
(0)
ಣ
(0)
ತ
(33)
ಥ
(0)
ದ
(9)
ಧ
(2)
ನ
(18)
ಪ
(28)
ಫ
(0)
ಬ
(16)
ಭ
(10)
ಮ
(18)
ಯ
(1)
ರ
(4)
ಱ
(0)
ಲ
(6)
ವ
(10)
ಶ
(24)
ಷ
(1)
ಸ
(21)
ಹ
(21)
ಳ
(0)
ವಚನಕಾರ: ಆದಯ್ಯ
ಅಂಕಿತ ನಾಮ: ಸೌರಾಷ್ಟ್ರ ಸೋಮೇಶ್ವರ
ಕಾಲ: 1165
ದೊರಕಿರುವ ವಚನಗಳು: 403 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಸೌರಾಷ್ಟ್ರ ಪ್ರಾಂತ್ಯ
ಪರಿಚಯ: ಕಾಲ ಸು. 1165. ಸ್ಥಳ ಸೌರಾಷ್ಟ್ರ ಪ್ರಾಂತ್ಯ. ವ್ಯಾಪಾರದ ಸಲುವಾಗಿ ಪುಲಿಗೆರೆಗೆ (ಲಕ್ಷ್ಮೇಶ್ವರ) ಬಂದ; ಜೈನ ಹುಡುಗಿ ಪದ್ಮಾವತಿಯನ್ನು ಮದುವೆಯಾದ; ಮಾವನೊಡನೆ ವಾದಮಾಡಿ, ಸೌರಾಷ್ಟ್ರದ ಸೋಮೇಶ್ವರನನ್ನು ಕರೆತಂದು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸ್ಥಾಪಿಸಿದ ಅನ್ನುವ ಕಥೆಯನ್ನು ಆದಯ್ಯನ ರಗಳೆ ಮತ್ತು ಸೋಮನಾಥ ಚಾರಿತ್ರಗಳು ಹೇಳುತ್ತವೆ. ಹನ್ನೆರಡನೆಯ ಶತಮಾನದ ಮತೀಯ ವಾಗ್ವಾದಗಳಿಗೆ ಇವನ ಬದುಕು ಒಂದು ನಿದರ್ಶನದಂತಿದೆ. ಧರ್ಮತತ್ವಗಳ ವಿವೇಚನೆ ಇರುವ ಈತನ 403 ವಚನಗಳು ದೊರೆತಿವೆ.
ಜಗತ್ಪ್ರಪಂಚ ಮಾಡಿ, ಆ ಜಗದಲ್ಲಿ ಜೀವರೂಪಿಂದ ಬಳಿಸಂದನೆಂದು ಹೇಳುವ ಶ್ರುತಿಯಂತಿರಲಿ, ಜೀವನೆ ಶಿವನಾದಡೆ ಶೋಕ ಮೋಹ ಋಣ ರೋಗ ಪುಣ್ಯ ಪಾಪ ಕಾಲ ಕಲ್ಪಿತ ಪ್ರಳಯ ಪ್ರಕೃತಿ ಸಂಸಾರಪಾಶಬದ್ಧವುಂಟೆ? ಇವೆಲ್ಲವೂ ಜೀವಂಗಲ್ಲದೆ ಶಿವಂಗಿಲ್ಲವಾಗಿ ತ್ರಿಗುಣರಹಿತ ಸೌರಾಷ್ಟ್ರ ಸೋಮೇಶ್ವರನು.
ಜಿಹ್ವೆ ಗುಹ್ಯೇಂದ್ರಿಯದಿಚ್ಛೆಯುಳ್ಳನ್ನಕ್ಕ ಜಂಗಮವಲ್ಲ, ಪುತ್ರ ಮಿತ್ರ ಕಳತ್ರದಲ್ಲಿಯ ಮೋಹವುಳ್ಳನ್ನಕ್ಕ ಭಕ್ತನಲ್ಲ, ಮಾತಿನ ಮಾಲೆಯ ಹೆಚ್ಚು ಕುಂದಿನ ಹೋರಟೆಯುಳ್ಳನ್ನಕ್ಕ ಅದ್ವೈತಿಯಲ್ಲ, ಅಂಗ ಪ್ರಾಣದಾಶೆಯುಳ್ಳನ್ನಕ್ಕ ನಿಸ್ಪೃಹನಲ್ಲ. ಸೌರಾಷ್ಟ್ರ ಸೋಮೇಶ್ವರಲಿಂಗವನರಿಯದನ್ನಕ್ಕ ಸ್ವಯಾನುಭವಿಯಲ್ಲ.