ಆರುಸ್ಥಲದಲ್ಲಿ ನಿಂದವಂಗೆ ಬೇರೊಂದು ಬ್ರಹ್ಮದ ಮಾತೇಕೆ ?
ಬೀದಿಯಲ್ಲಿ ನಿಂದು ನೀನೇನು, ತಾನೇನು ಎಂಬವಂಗೆ ಆದ್ಯರ ವಚನವೇಕೆ ?
ಗಗನವ ಮುಟ್ಟುವಂಗೆ ಅಗಣಿತನ ಸುದ್ದಿಯೇಕೆ ?
ಆರುಸ್ಥಲದಲ್ಲಿ ನಿಂದವಂಗೆ ಅಭೇದ್ಯನ ಸುದ್ದಿಯೇಕೆ ?
ಆರು ಸ್ಥಲವೆಂಬುವ ಷಟ್ಸ್ಥಲಜ್ಞಾನಿಗಳ
ಅರಿವು ಮೀರಿದ ಘನವು ನಿಮಗೇಕೆ ? ಅಮುಗೇಶ್ವರಲಿಂಗವನರಿಯರಣ್ಣಾ.