ಅಂಗ ಕೋಟೆ, ಭುಜ ಆಳುವೇರಿ, ತಲೆ ತೆನೆ, ಕಣ್ಣು ಅಂಬುಗಂಡಿ,
ಕಾದುವ ಅರಸು ಅಸುರಾಜ, ಕೂಟದ ಮನ್ನೆಯರು ಐದುಮಂದಿ.
ಎಂಟು ಘಟೆಯಾನೆ, ಪಂಚವಿಂಶತಿ ಕುದುರೆ,
ಆಳು ಪರಿವಾರ ಕರಣಂಗಳ ಮೊತ್ತ ಕೂಡಿ ಇರಿಯಿತ್ತು.
ಅರಿರಾಜ ತಮವಿರೋಧಿಯೊಡನೆ ಮುರಿದ,
ಅಸುರಾಜ, ಪಶುಪತಿಯ ಗೆದ್ದ.
ಎನಗಾಯಿತ್ತು ಹೇಳಾ, ಅಲೇಖನಾದ ಶೂನ್ಯ ಕಲ್ಲಿನೊಳಗಾದನೆ.