ಹುಟ್ಟದೆ ಬ್ರಹ್ಮನ ಹಂಗಿನಲ್ಲಿ, ಬೆಳೆಯದೆ ವಿಷ್ಣುವಿನ ಹಂಗಿನಲ್ಲಿ,
ಸಾಯದೆ ರುದ್ರನ ಬೆಂಬಳಿಯಲ್ಲಿ ,
ಹರಿಯಿತ್ತು ಬ್ರಹ್ಮನ ಬಲೆ, ಗುರುವಿನ ಕರದಲ್ಲಿ.
ಬಿಟ್ಟಿತ್ತು ವಿಷ್ಣುವಿನ ಸುಖ, ಲಿಂಗದ ಅರ್ಪಿತದಲ್ಲಿ.
ಮರೆಯಿತ್ತು ರುದ್ರನ ಮರಣ, ವಸ್ತುವಿನ ಮೂರ್ತಿಯಲ್ಲಿ.
ಮತ್ತೆ ನಾನಿನ್ನಾರ ಕೇಳಿಹೆ ?
ಅಲೇಖನಾದ ಶೂನ್ಯ ಕಲ್ಲ ಬಿಟ್ಟ ತೆರನ ಕಂಡೆ.