ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಚಾರ ಸದಾಚಾರ ವಿಚಾರ ಅವಿಚಾರ ಚತುವಿರ್ಧಕ್ಕೆ ಕರ್ತೃವಹಲ್ಲಿ ಭೇದಮಾರ್ಗಂಗಳ ತಿಳಿದು ಪಂಚಸೂತ್ರ ಲಕ್ಷಣಂಗಳನರಿತು ರವಿಶಶಿ ಉಭಯ ಸಮಾನಂಗಳ ಕಂಡು ವರ್ತುಳಯೋನಿಪೀಠದಲ್ಲಿ ಗೋಳಕಾಕಾರವ ಸಂಬಂಧಿಸುವಲ್ಲಿ ಅಷ್ಟಗಣ ನೇಮಂಗಳ ದೃಷ್ಟವ ಕಂಡು ರವಿ ಶಶಿ ಪವನ ಪಾವಕ ಆತ್ಮ ಮುಂತಾದ ಪವಿತ್ರಂಗಳಲ್ಲಿ ಮಾಂಸಪಿಂಡತ್ರಯವ ಕಳೆದು ಮಂತ್ರಜ್ಞಾನದಲ್ಲಿ ಸರ್ವೇಂದ್ರಿಯವ ಕಳೆದು ವೇದನೆ ವೇಧಿಸಿ ಸರ್ವಾಂಗವ ಭೇದಿಸಿ, ಸ್ವಸ್ಥಾನದಲ್ಲಿ ಘಟಕ್ಕೆ ಪ್ರತಿಷೆ* ಆತ್ಮಂಗೆ ಸ್ವಯಂಭುವೆಂಬುದು ಶ್ರುತದಲ್ಲಿ ಹೇಳಿ, ದೃಷ್ಟದಲ್ಲಿ ತೋಱÂ ಅನುಮಾನದಲ್ಲಿ ಅರುಪಿ ಸುಖಸುಮ್ಮಾನಿಯಾಗಿ ಕ್ರೀಯಲ್ಲಿ ಆಚರಣೆ, ಜ್ಞಾನದಲ್ಲಿ ಪರಿಪೂರ್ಣತ್ವ. ಇಂತೀ ಗುಣಂಗಳ ತಿಳಿವುದು ಆಚಾರ್ಯನ ಅಂಗಸ್ಥಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಆಚಾರ್ಯನಾದ ಲೀಲಾಭಾವ.
--------------
ಪ್ರಸಾದಿ ಭೋಗಣ್ಣ
ಆಚಾರದಿಂದ ವಿಚಾರಿಸಿ ದೀಕ್ಷೆಯ ಮಾಡುವುದು ಗುರುಸ್ಥಲ. ವಿಚಾರ ಸರ್ವಗಣಾಚಾರದಿಂದ ದೀಕ್ಷೆಯ ಮಾಡುವುದು ಜಂಗಮಸ್ಥಲ. ಈ ಉಭಯದ ಗೊತ್ತ ಮುಟ್ಟಿ, ನಿಶ್ಚಯ ನಿಜವ ಮುಟ್ಟಿ ಪಂಚವಿಂಶತಿತತ್ವಂಗಳಲ್ಲಿ ಷಟ್ಕರ್ಮ ತ್ರಿವಿಧಾತ್ಮ ಭೇದಂಗಳಲ್ಲಿ ಏಕೋತ್ತರಶತಸ್ಥಲವೆಂಬ ಭಿನ್ನಭಾವಂಗಳನರಿದು ಐವತ್ತೊಂದಕ್ಷರದ ಬೀಜನೇಮವನೊಂದಕ್ಷರದಲೈಕ್ಯವನರಿತು ಇಂತೀ ಐವತ್ತೆರಡು ಗುರುಲಫು ಗುಣನೇಮ ಬಿಂದು ವಿಸರ್ಗ ಶಾಖೆ ಮುಂತಾದವನೊಂದುಗೂಡಿ ನಿರುತದಿಂದ ನಿಂದುದು ಜ್ಞಾನದೀಕ್ಷೆ. ಇಂತೀ ಗುರುಸ್ಥಲದ ವಿವರ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಆತ್ಮವಸ್ತುವೆಂದಲ್ಲಿ ಅರಿವು ಮರವೆ ಉಂಟೆ ? ಹೇಮ ತನ್ಮಯವಾದಲ್ಲಿ ಪರುಷರಸವುಂಟೆ ? ನಾನು ನೀನಾದಲ್ಲಿ ಕರ್ತೃ ಭೃತ್ಯತ್ವವೆಂಬುದು ಎತ್ತಣ ಸುದ್ದಿ ಹೇಳಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನ ?
--------------
ಪ್ರಸಾದಿ ಭೋಗಣ್ಣ