ರಿತು ರುತು ಪ್ರಾತಃಕಾಲ
ಅಘ್ರ್ಯಂಗಳ ನ್ಯಾಸ ಅಂಗುಲವಾಸ ಪಚ್ಫಳ ಮಡಿ ಕಟಿಸೂತ್ರ
ಗುಹ್ಯ ನಾಭಿ ಪಂಚಾಗ್ನಿ ಮಧ್ಯ ಬಾಹುಗಳ ಜಿಹ್ವೆ
ನಾಸಿಕ ನಯನ ಕರ್ಣ ಲಲಾಟ ಮಸ್ತಕ ಕರ ಸಂಜ್ಞೆಗಳಲ್ಲಿ
ನ್ಯಾಸಸೂತಕನಾಗಿ, ಜಪಗ್ರಹಿತನಾದಡೂ
ಶಿವಧ್ಯಾನಮೂರ್ತಿಯಿಂದ ಪರಿಹರಿಸಬೇಕು,
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ ಕರ್ಮಕ್ರೀ.