ಗ ಪದದಿಂದ ಪ್ರಾರಂಭವಾಗುವ ವಚನಗಳು:
ಗುರುವೆಂದು ಇದಿರಿಟ್ಟಲ್ಲಿ ಗುರುದ್ರೋಹ.ಲಿಂಗವೆಂದು ಸಂದೇಹಿಸಿದಲ್ಲಿ ಲಿಂಗದ್ರೋಹ.ಜಂಗಮವೆಂದು ಉಭಯದಲ್ಲಿಕಂಡಡೆ ಜಂಗಮದ್ರೋಹ.ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆಂದುಇದಿರೆಡೆಯಾಡಿದಡೆ ಮಹಾದ್ರೋಹ.
ಗೃಹಸ್ಥಧರ್ಮದ ಗುರುವಿನ ದೀಕ್ಷಾಚಾರ್ಯನ ಭೇದಪಿಂಡೋತ್ಪತ್ಯ ಜಾತಿ ಗೋತ್ರ bs್ಞಂದಸ ಭೇದಸಲಕ್ಷಣ ನೀತಿ ಭಕ್ತಿ ಸಂಪೂರ್ಣ ಕಳೆಯನರಿತುಕುಚಿತ್ತ ಕುಹಕ ಕ್ಷುದ್ರ ಪಿಸುಣತ್ವ ಅಸಿಘಾತಕ ಪಾರದ್ವಾರಇಂತಿವು ಮುಂತಾದವೆಲ್ಲವ ಸಂತೈಸಿ ಸೋದಿಸಿಹದಿನೆಂಟನೆಯ ದೋಷಂಗಳ ವಿಭಾಗಿಸಿ ತೋರಿಪಾಪದ ಹೆಚ್ಚುಗೆಯ ಪುಣ್ಯದ ಸನ್ನದ್ಧವಂ ತೋರಿಹದಿನೆಂಟು ಸೂತ್ರವಂ ಪ್ರಕರಣಮಂ ಮಾಡಿಜಾನು ಜಂಘ ಕಟಿ ನಾಭಿ ಹೃದಯಮಧ್ಯಕಂಠ ಕರ್ಣ ಜಿಹ್ವೆ ನಾಸಿಕ ನಯನಕಪಾಲ ಕರ ಮುಂತಾಗಿ ಪೂರ್ವಾಶ್ರಯಂಗಳಂ ಬಿಡಿಸಿಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡುವಲ್ಲಿಸ್ಥೂಲದ ವ್ಯವಹರಣೆ ಸೂಕ್ಷ್ಮದ ಪ್ರಕೃತಿಕಾರಣದ ಪ್ರಮೇಯವಂ ಕಾಣಿಸಿಕೊಂಡುರಸ ಗಂಧ ರೂಪು ಶಬ್ದ ಸ್ಪರ್ಶ ಪಂಚೇಂದ್ರಿಯಂಗಳಲ್ಲಿ ಸಂಶಯಮಂಪರಿಹರಿಸಿಮನ ವಚನ ಕಾಯ ತ್ರಿಕರಣವಂ ಶುದ್ಧಾತ್ಮವಂ ಮಾಡಿಈಶ್ವರಧ್ಯಾನದಿಂದ ಕರಕಮಲವಂಕಪಾಲದ ಮೇಲೆ ಮೂರ್ತಿಗೊಳಿಸಿಧ್ಯಾನಪ್ರಯೋಗಮಂ ಕಲ್ಪಿಸಿ ಜ್ಞಾನಪ್ರಯೋಗಮಂ ವೇಧಿಸಿಮೇಲೆ ಪ್ರಾಣಲಿಂಗಪ್ರತಿಷೆ*ಯ ಮಾಡುವಲ್ಲಿಅಂಗಕ್ಕೆ ಆಚಾರ ಆತ್ಮಂಗೆ ಅರಿವು ಈ ಗುಣ ಸಂಭವಿಸಿದ ಮೇಲೆಹಸ್ತಮಸ್ತಕದ ಸಂಯೋಗವಇಷ್ಟತನುವಿಂಗೆ ಇಷ್ಟಲಿಂಗವ ಸಂಬಂಧಿಸಬೇಕು.ಇದು ಚತುರ್ವಿಧಮತದ ಆಚಾರ್ಯನಂಗ, ಗುರುಸ್ಥಲದ ಭಿತ್ತಿಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿಗುರುದೀಕ್ಷಾಸೂತ್ರ.
ಗುರುವಿಂಗೆ ಗುರುವುಂಟು, ಉಭಯನಾಮವಾಗಿ.ಲಿಂಗಕ್ಕೆ ಲಿಂಗವುಂಟು, ಕುರುಹೆಂಬ ಭೇದವುಂಟಾಗಿ.ಆತ್ಮಂಗೆ ಅರಿವುಂಟು, ಮುಂದೆ ಒಂದು ಮರಣವುಂಟಾಗಿ.ಇಂತೀ ಭೇದಂಗಳು ಬೇಕಾದ ಉಮಾಪತಿಯಾದಲ್ಲಿ ಉಭಯವಾಯಿತ್ತು.ಶಕ್ತಿಸಮೇತವೆಂಬುದು ಕರ್ತೃಭೃತ್ಯ ಸಂಬಂಧ.ಇಂತೀ ಆಚಾರ್ಯನಂಗಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ.