ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಖದ್ಯೋತ ಕೀಟಕವ ಮುಚ್ಚಿರಿಸಿದಲ್ಲಿ ಮತ್ತೆ ಉಂಟೆ ಆ ಕಳೆ ದಿನಪನ ಬೆಳಗಿನಲ್ಲಿ ? ಮತ್ತರಪ್ಪ ದುರ್ವಾಚಕರ ಮಾತಿನಮಾಲೆ ಸ್ವಯ ಸ್ವಾನುಭಾವಿಕರಲ್ಲಿ ಉಂಟೆ ? ಆತ್ಮವಾದಿಯ ಮಾತು, ವೈದಿಕ ಕರ್ಮದ ಕ್ರೀ ಸಾಧಕನ ಶರೀರಧರ್ಮ ಈ ಗುಣ ಸದ್ಭಾವಿಯ ಸ್ವಯವ ಮುಟ್ಟದಾಗಿ. ಇಂತೀ ಅಭೇದ್ಯವಸ್ತುವನರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಖಂಡವ ಮೆದ್ದು ಅರಗಿಸಿ ಹೆಂಡವ ಕುಡಿದು ಉನ್ಮತ್ತವಿಲ್ಲದೆ ಮಿಕ್ಕಾದ ಕಿರುಹಕ್ಕಿಯ ಕೊಂದು ಕುಕ್ಕೆಯೊಳಗಿಟ್ಟು ಹೆಬ್ಬದ್ದ ಹಿಡಿದು ಕಬ್ಬದ್ದ ಬಾಣಸವ ಮಾಡಿ ಹುಲಿಯ ಹಲ್ಲ ಕಿತ್ತು, ಎರಳೆಯ ಕಾಲ ಮುರಿದು ಲಂಘಿಸುವ ಸಿಂಹದ ಅಂಗವ ಸೀಳಿ ಉನ್ಮತ್ತದಿಂದ ಬಂದಪ್ಪ ಗಜವ ಕಂಗಳು ನುಂಗಿ ಮೊಲ ನಾಯ ಕಚ್ಚಿ ನರಿ ಬಲೆಯ ನುಂಗಿ ಸರ್ಪನ ಗಾಳಿ ತಾಗಿ ಗರುಡ ಸತ್ತು ಇಂತಿವು ಹಗೆ ಕೆಳೆಯಾಗಿರಬಲ್ಲಡೆ ಭಕ್ತ. ಇಂತಹ ಭಕ್ತ ಕೆಳೆಯಾಗಿರಬಲ್ಲಡೆ ಮಾಹೇಶ್ವರ. ಇಂತಹ ಮಾಹೇಶ್ವರ ಕೆಳೆಯಾಗಿರಬಲ್ಲಡೆ ಪ್ರಸಾದಿ. ಇಂತಹ ಪ್ರಸಾದಿ ಕೆಳೆಯಾಗಿರಬಲ್ಲಡೆ ಪ್ರಾಣಲಿಂಗಿ. ಇಂತಹ ಪ್ರಾಣಲಿಂಗಿ ಕೆಳೆಯಾಗಿರಬಲ್ಲಡೆ ಶರಣ. ಇಂತಹ ಶರಣ ಕೆಳೆಯಾಗಿರಬಲ್ಲಡೆ ಐಕ್ಯ. ಇಂತಹ ಐಕ್ಯಾನುಭಾವ ಕೆಳೆಯಾಗಿರ್ದಲ್ಲಿ ಮಹದೊಳಗಾಯಿತ್ತು. ಆ ಮಹದೊಳಗು ಸಯವಾದಲ್ಲಿ ಸರ್ವಮಯವೆಂಬುದು ಇಹಪರ ನಾಸ್ತಿ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಇದಿರೆಡೆಯಿಲ್ಲ.
--------------
ಪ್ರಸಾದಿ ಭೋಗಣ್ಣ