ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾನಾ ಶಬ್ದ ಸಂಸ್ಕøತ ದೇಶೀಯ ವ್ಯಾಕರಣಸೂತ್ರ ಮುಂತಾದ ಬಿಂದು ಮಾತೃಕ ತ್ರಿಲಿಂಗಭೇದ ಉಪನಿಷತ್ತು ಸಂಹಿತೆ ಜಯಂತಿ ಚತು[ರ್ಥಿ]ಕ ನಿಮಿಷಕ ಈ ಉಭಯ ಪ್ರತಿಷ್ಠೆ ವಾಚಕ ಮತಿ ವಾಯುಬಿಂದು ಕೂಡಿದ ಆಮ್ನೆ ಇಂತಿವ ಲಕ್ಷಿಸಿ ನಿಂದಡೂ ತ್ರಿಗುಣಮಲತ್ರಯಕ್ಕೆ ಹೊರಗಾಗಬೇಕು. ಹೊರಗಾದಡೂ ದುರ್ವಾಸನೆ ಆತ್ಮಭೇದಂಗಳಲ್ಲಿ ನಿಜವಸ್ತುವ ಕುರಿತು ಸ್ವಸ್ಥನಾಗಿರಬೇಕು. ಇಂತೀ ಗುಣಸ್ವಸ್ಥನಾಗಿ ನಿಂದಲ್ಲಿ ಅಂಗಕ್ಕೆ ಆಚಾರ, ಮನಕ್ಕೆ ಅರಿವು. ಅರಿವೆಂಬುದೊಂದು ಕುರುಹು ನಿಷ್ಪತ್ತಿಯಹನ್ನಕ್ಕ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾಎನುತ್ತಿರಬೇಕು.
--------------
ಪ್ರಸಾದಿ ಭೋಗಣ್ಣ
ನ ಎಂಬಕ್ಷರದ ಭೇದ ಜನನ ನಾಸ್ತಿಯಾದ ವಿವರ. ಮ ಎಂಬಕ್ಷರದ ಭೇದ ಮರಣ ನಾಸ್ತಿಯಾದ ವಿವರ. ಶಿ ಎಂಬಕ್ಷರದ ಭೇದ ಸ್ವೀಕರಣೆ ನಾಸ್ತಿಯಾದ ವಿವರ. ವ ಎಂಬಕ್ಷರದ ಭೇದ ವಕಾರ ನಾಸ್ತಿಯಾಗಿ ಸಾಕಾರವಳಿದ ಭೇದ. ಯ ಎಂಬಕ್ಷರದ ಭೇದ ತತ್ವಮಸಿಯೆಂಬ ಬ್ಥಿತ್ತಿಯ ಮೆಟ್ಟದೆ ಉತ್ಪತ್ಯ ಸ್ಥಿತಿ ಲಯವೆಂಬ ತ್ರಿವಿಧವ ಮುಟ್ಟದೆ ಅದು ನಿಶ್ಚಯವಾದಲ್ಲಿ ಪಂಚಾಕ್ಷರಿಯ ಭೇದ. ಇಂತೀ ಭೇದಂಗಳಲ್ಲಿ ಜಪಧ್ಯಾನವ ಧ್ಯಾನಿಸಿ ಇಷ್ಟ ಕಾಮ್ಯ ಮೋಕ್ಷಂಗಳೆಂಬ ಮೂರಂಗುಲವನರಿವುದು. ಸದೃಷ್ಟ ತನ್ನಷ್ಟವೆಂಬ ಉಭಯದ ಅಂಗುಲವ ಕಂಡು ಚತುರ್ವಿಧಫಲಪದಂಗಳಲ್ಲಿ ಭಾವಿಸಿ ಕಲ್ಪಿಸದಿಪ್ಪುದು ಜಪಧ್ಯಾನ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ನಾನಾ ವೇದ ಶಾಸ್ತ್ರ ಪುರಾಣ ಆಗಮ ಪಾಠಕನಾದಲ್ಲಿ ಪರಿಭಾಷೆ ಪರತತ್ವದ ಮಾತನಾಡಿದಡೇನು ? ಜಿಹ್ವೇಂದ್ರಿಯಕ್ಕೆ ಹರಿಯದೆ, ಗುಹ್ಯೇಂದ್ರಿಯಕ್ಕೆ ಸಿಕ್ಕದೆ ಬಂದ ತೆರನನರಿದು ವಿಚಾರಿಸಿ ಮುಟ್ಟುವ ಕಟ್ಟನರಿತು ಅರ್ಪಿತದ ಭೇದವನರಿದು ವಸ್ತುವಿಪ್ಪೆಡೆಯಲ್ಲಿ ಅರ್ಪಿಸಬಲ್ಲಡೆ ವಿರಕ್ತನು, ಅಲ್ಲದಿರ್ದಡೆ ಪಂಡಿತನಪ್ಪನು. ಇಂತೀ ಉಭಯದ ಸೊಲ್ಲನರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ನಾನಾ ಶಬ್ದಸೂತ್ರ ಲಕ್ಷಣಂಗಳಲ್ಲಿ ನ್ಯೂನಾಧಿಕವಿಲ್ಲದಂತೆ ವಚನಂಗಳ ರಚನೆಗಳಲ್ಲಿ ನಿರ್ವಚನ ಕಾರಣನಾಗಿ ಸರ್ವಗುಣಸಂಪನ್ನನಾರ್ಗಿದಲ್ಲಿ ಭೂತಹಿತವನರಿತು ಆತ್ಮಚಿತ್ತವ ಮರೆದು ಶರಣ ಸಂಭಾಷಣೆಯಲ್ಲಿ ಶಿವಮೂರ್ತಿಧ್ಯಾನಂಗಳಲ್ಲಿ ಶಿವಕಥನ [ಯಥಾ ಕಥನ] ಪ್ರಸಂಗಳಲ್ಲಿ ಶಿವಪೂಜಾ ಮೂರ್ತಿಧ್ಯಾನಂಗಳಲ್ಲಿ ಉಭಯವಳಿದು ಏಕವಾಗಿ ಸ್ವೀಕರಿಸಿದಲ್ಲಿ ಚನ್ನಬಸವಣ್ಣಪ್ರಿಯಭೋಗಮಲ್ಲಿಕಾರ್ಜುನಲಿಂಗವ ಅವಧರಿಸಿದ ಅಂಗ
--------------
ಪ್ರಸಾದಿ ಭೋಗಣ್ಣ
ನಾನಾ ಶ್ರುತಿತತ್ವಂಗಳಲ್ಲಿ ಸಾಮ ಅಥರ್ವಣ ಯಜುಸ್ಸು ಋಗ್ವೇದ ಮೊದಲಾದ ಶಂಕರಸಂಹಿತೆ ಉಪೇಕ್ಷೆ ಅಭಿಸಂಧಿ ಚಿಂತನೆ ಸೂತ್ರಾವರಣಭೇದ ತಂತ್ರ ಖಂಡಿತ ಖಂಡನ ಉತ್ತರ ನಿರುತ್ತರ ಮುಂತಾದ ಯುಕ್ತಿಯಲ್ಲಿ ನುಡಿದಡೂ ಶಬ್ದಶಾಸ್ತ್ರಕ್ಕೆ ಹೆಚ್ಚುಗೆವಂತನಲ್ಲದೆ ವಿರಕ್ತಿಗೆ ಸಲ್ಲ. ತತ್ವಂಗಳನೆಲ್ಲವನರಿವುದಕ್ಕೆ ರುಜೆಗೆ ಚಿಕಿತ್ಸೆಯಂತೆ ಫಲ ಫಲಿಸುವಂತೆ ವೇದನೆ ವೇಧಿಸಿ ವಿಭೇದವಿಲ್ಲದೆ ನಿಂದಂತೆ ವಾಚಕಾವೃತ್ತಿಯ ಕ್ರೀ ಸರ್ವದುರ್ಗುಣವ ನೇತಿಗಳೆವ ವಸ್ತುಕೂಟಯೇಕವಾದಲ್ಲಿ ನುಡಿ ನಡೆ ಸಿದ್ಧಾಂತ. ಇದು ಸತ್ಪಥಮಾರ್ಗದ ಭಿತ್ತಿಯ ಹಾದಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಪ್ರಸಾದಿ ಭೋಗಣ್ಣ
ನಾನಾ ವರ್ಣಕ್ಕೆ ಶ್ವೇತಾಂಗ ಅಂಗವಾಗಿ ಮಿಕ್ಕಾದ ವರ್ಣಂಗಳಿಗೆ ಇಂಬುಗೊಟ್ಟಂತೆ. ಐಕ್ಯಸ್ಥಲ ಆದಿಯಾಗಿ, ಶರಣಸ್ಥಲ ಸಂಬಂಧಿಯಾಗಿ ಪ್ರಾಣಲಿಂಗಿಸ್ಥಲ ಏಕವಾಗಿ, ಪ್ರಸಾದಿಸ್ಥಲ ಪರಿಪೂರ್ಣವಾಗಿ ಮಾಹೇಶ್ವರಸ್ಥಲ ಮಾಯಾಮಲಂ ನಾಸ್ತಿಯಾಗಿ ಭಕ್ತಿಸ್ಥಲ ಸರ್ವಗುಣಸಂಪನ್ನವಾಗಿ ಅಳಿವು ಉಳಿವು ಗರ್ಭಾಂತರವನರಿತು ನೋಡನೋಡ ಮಹದೊಡಲಿಕ್ಕೆ ರಂಜನೆ ಬಿಸಿಲೊಳಗಡಗಿ, ಬಿಸಿಲು ರಂಜನೆಯ ನುಂಗಿ ಉತ್ತರ ಪೂರ್ವವ ಹೊತ್ತಾಡಿ, ಪೂರ್ವ ಉತ್ತರದಲ್ಲಿ ನಿಶ್ಚಯವಾಗಿ ಬೆಸುಗೆ ಕಲೆದೋರದೆ ಉಭಯಚಕ್ಷು ಏಕರೂಪವಾಗಿ ಲಕ್ಷಿಸಿ ನಿರ್ಧರವೆಂದಲ್ಲಿ ಗುರಿಯನೆಚ್ಚ ಕರ ಅಹುದಲ್ಲಾ ಎಂಬುದನರಿದಂತೆ ಕ್ರೀಯಲ್ಲಿ ಮಾರ್ಗ, ಜ್ಞಾನದಲ್ಲಿ ನಿಶ್ಚಯ ಇಂತಿವನರಿದು ಅರುಹಿಸಿಕೊಂಬ ಭೇದ. ಕರ್ತೃಭೃತ್ಯಸಂಬಂಧ ವಸ್ತು ಶಕ್ತಿಸಮೇತವಾದ ಭೇದ. ಇಂತೀ ಸ್ಥಳಂಗಳು, ಭಕ್ತಿಗೆ ನಾಮರೂಪಾದ ಭೇದವನರಿತು ಸ್ಥಲಂಗಳ ಹಂಚಿಹಾಕಿ, ಕುರುಡ ದಡಿವಿಡಿದು ನಡೆವಂತೆ ಷಟ್‍ಸ್ಥಲಭೇದ. ಆ ಭೇದಲೋಲುಪ್ತನಾಗಿ ಸರ್ವಾಂಗಲಿಂಗಭರಿತನಾಗಿ ಆಹ್ವಾನ ವಿಸರ್ಜನವಿಲ್ಲದೆ ನಾಮರೂಪೆಂಬ ಉಭಯವಳಿದು ಕಲೆ ತಲೆದೋರದೆ ನಿಂದ ಉಳುಮೆ ಐಕ್ಯಸ್ಥಲಕೂಟ ನಿರ್ವಾಹ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ನಂದಿಯೆಂಬ ಗಣಿತದ ಲೆಖ್ಖದಲ್ಲಿ ಸರ್ವವೆಲ್ಲವೂ ಹೊಂದಿ ಜಾಗರದಿಂದ ಸಂದು ಕವಲಾದಂತೆ ಈ ಗುಣ ಲಿಂಗೋದ್ಭವದ ಭೇದ. ಈ ಗುಣ ಜಗದ ಸಂದೇಹಿಗಳಿಗೆ ಹಾಕಿದ ಕಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾಎಂಬ ಭಾಷೆ.
--------------
ಪ್ರಸಾದಿ ಭೋಗಣ್ಣ