ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಷಡ್ದರ್ಶನಕ್ಕೆ ದೈವವೊಂದೆಂದಡೆ ವಾದಕ್ಕೆ ಮೂಲ ಹಲವೆಡೆಯೆಂದಡೆ ಸಮಯಕ್ಕೆ ದೂರ. ತಮ್ಮ ಒಲವರದಿಂದ ಕುಲದೈವ ಫಲಿಸುವಂತೆ ಏಕಛತ್ರವ ಕೊಟ್ಟು ರಾಣುವೆಗೆ ಹೊಲಬಿಗರ ಮಾಡಿದಂತೆ ದೇವನೊಬ್ಬ ತ್ರೈಮೂರ್ತಿಗಳಿಗೆ ಭೇದವ ಕೊಟ್ಟುಯಿಪ್ಪುದ ನಿಮ್ಮ ವೇದದ ಕಡೆಯಲ್ಲಿ ನೋಡಿಕೊಳ್ಳಿ. ಶಾಸ್ತ್ರದ ಸಂದನಿಯಲ್ಲಿ ಕಂಡುಕೊಳ್ಳಿ. ಪುರಾಣದ ಮೊದಲಪ್ರಸಂಗದಲ್ಲಿ ಸಂದೇಹವಿಡಿಸಿಕೊಳ್ಳಿ. ಆಗಮಂಗಳಲ್ಲಿ ತಿಳಿದು ನಾದಬಿಂದುಕಳೆಗೆ ಆತನಾರೆಂಬುದ ಕಂಡುಕೊಳ್ಳಿ. ಹದಿನೆಂಟುದೋಷಂಗಳಲ್ಲಿ ತ್ರಿವಿಧಮಲಂಗಳಲ್ಲಿ ತ್ರಿಜಾತಿ ವಂಶಭೇದದಲ್ಲಿ ತ್ರಿಗುಣಾತ್ಮಕನಾರೆಂಬುದ ತಿಳಿದು ಆದಿಯಿಂದಿತ್ತ ಅನಾದಿಯಿಂದತ್ತ ಲೀಲೆಯಿಂದಿತ್ತ ಸ್ವಯಂಭುವಿಂದತ್ತ ಈ ವಿಭೇದಕ್ಕೆ ಭೇದಕನಾರೆಂಬುದನರಿತು ಅಭೇದ್ಯವಸ್ತು ಭಕ್ತಿ ಕಾರಣದಿಂದ ವೇದ್ಯನಾಗಿ ಬಂದು ಜಗಹಿತಾರ್ಥವಾಗಿ ಬ್ರಹ್ಮಂಗೆ ಪ್ರಜಾಪತಿ ವಿಷ್ಣುವಿಂಗೆ ಯೋನಿ ಸಂಭವ, ರುದ್ರಂಗೆ ಬಿಂದು ಕಳೆಯಂ ಕೊಟ್ಟು ಮರೀಚಿಕ ಪ್ರಳಯರುದ್ರಂಗೆ ಸಂಹಾರವನಿತ್ತು ಇಂತಪ್ಪ ಭೇದದಲ್ಲಿ ವೇದ್ಯವಪ್ಪ ವಸ್ತುವ ನೋಡಿಕೊಳ್ಳಿ. ಇದರಿಂದ ವೆಗ್ಗಳವುಂಟೆಂದಡೆ ಸೋಧಿಸಿಕೊಂಬ ಶತಸಹಸ್ರ ಅವತಾರಂಗಳಿಂದೀಚೆ ಆದ ದಶ ಅವತಾರಕ್ಕೆ ಒಳಗಾದವನ ತಪ್ಪಿಂದ ಶಿರಸ್ಸನ್ನು ಒಪ್ಪಗೆಡಿಸಿದವನ ಬೌದ್ಭನಾಗಿ ಭ್ರಮೆಯಿಂದ ನಾಣುಗೆಟ್ಟು ನಾಚಿಕೆಯಿಲ್ಲದವನ ತೊಡೆ, ಜಠರದಲ್ಲಿ ಮಡದಿಯರವೊಡಗೂಡಿಯಿಪ್ಪವನ ಇಂತೀ ಇವರನು ಅಡಿಗೆರಗಿಸಿಕೊಂಬ ಒಡೆಯ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ.
--------------
ಪ್ರಸಾದಿ ಭೋಗಣ್ಣ