ಗುರುವಿನಲ್ಲಿ ಗುಣವನರಸಲಿಲ್ಲ,
ಲಿಂಗದಲ್ಲಿ ರೂಪವನರಸಲಿಲ್ಲ,
ಜಂಗಮದಲ್ಲಿ ಕುಲವನರಸಲಿಲ್ಲ,
ಇದು ಕಾರಣ, ಬೇರುಪಡಿಸಿ
ಗುರುವಿನಲ್ಲಿ ಗುಣವನರಸಿದೆನಾದೊಡೆ ಕರ್ಮಕೆ ಬೀಳುವೆನಯ್ಯ.
ಲಿಂಗದಲ್ಲಿ ರೂಪವನರಸಿದೆನಾದೊಡೆ ಭವಕೆ ಬೀಳುವೆನಯ್ಯ.
ಜಂಗಮದಲ್ಲಿಕುಲವನರಿಸಿದೆನಾದೊಡೆ ಅಘೋರ ನರಕದಲ್ಲಿಬೀಳುವೆನಯ್ಯ.
ಇದಕ್ಕೆ ಸಾಕ್ಷಿ-ಅಗ್ನಿಯಲ್ಲಿ ಸಕಲ ತರುವಾದಿಗಳ ತಂದು
ಸುಟ್ಟು, ಭಸ್ಮವ ಮಾಡಲೊಡನೆ
ಆ ಭಸ್ಮವ ಕುರುಹು ಇಟ್ಟು ನುಡಿಯಲಾಗದಯ್ಯ
ಝೇಂಕಾರ ನಿಜಲಿಂಗಪ್ರಭುವೆ.