ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದಯಕಾಲ ಮಧ್ಯಾಹ್ನಕಾಲ ಅಸ್ತಮಯಕಾಲದಲ್ಲಿ, ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವಾತನೆ ಸದ್ಭಕ್ತನು. ಇಂತೀ ತ್ರಿಕಾಲದಲ್ಲಿ ಲಿಂಗಾರ್ಚನೆಯ ಮಾಡುವಲ್ಲಿ, ಹಿಂದಣ ಕ್ರೀಯಿಂದ ಮಾಡಬೇಕು. ಅಂತಲ್ಲದೆ ಸುಮ್ಮನೆ ಲಿಂಗಾರ್ಚನೆಯ ಮಾಡುವಾತ, ಭಕ್ತನಲ್ಲ, ಮಾಹೇಶ್ವರನಲ್ಲ, ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನಲ್ಲ ಐಕ್ಯನಲ್ಲ. ಅವನು ಶ್ರೀಗುರುವಿನಾಜ್ಞೆಯ ಮೀರಿದವನು, ಪಂಚಮಹಾಪಾತಕನು, ಲಿಂಗಚೋರಕನು. ಇದನರಿದು ತ್ರಿಸಂಧ್ಯಾಕಾಲದಲ್ಲಿ ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಹಿಂದಣ ಕ್ರೀವಿಡಿದು ಮಾಡುವ ಸದ್ಭಕ್ತಂಗೆ ನಮೋ ನಮೋ ಎನುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಉಪ್ಪರಗುಡಿ ತೋರಣ ಕಟ್ಟಿತ್ತು ಕಲ್ಯಾಣದಲ್ಲಿ. ಅಷ್ಟದ್ವಾರದಂಗಡಿ ರಾಜವೀದ್ಥಿಯೊಳೆಲ್ಲಾ ವ್ಯಾಸನ ಬಾಹುಗಳುಪ್ಪರಿಸಿದವು. ಎಂಟುಬಾಗಿಲಲ್ಲಿ ನಡೆಮಡಿಗಳ ಹಾಸಿ, ಸಂಕಲ್ಪ ಸಂತೋಷವ ಮಾಡಿದನು ವೃಷಭೇಶ್ವರನು, ಬಸವಪ್ರಿಯ ಕೂಡಲಚೆನ್ನಸಂಗಯ್ಯ ಬಂದಾನೆಂದು,
--------------
ಸಂಗಮೇಶ್ವರದ ಅಪ್ಪಣ್ಣ
ಉತ್ತಮಾಂಗವೆನಿಸುವ ಶಿರಸ್ಸಿಗೆ ನಿತ್ಯವಿದೆಂದು ಹೇಳಿತ್ತು ವೇದ. ನೆಟ್ಟನೆ ಶಿವನಡಿಗೆರಗುವುದು, ಮತ್ತನ್ಯದೈವಕ್ಕೆರಗಲಾಗದೆಂದುದು ವೇದ. ಒಂ ಯಸ್ಮೈನಮಃ ಸಚ್ಛಿರೋಧರ್ಮ ಮೂಧ್ರ್ನಿ ನಾನಾಬ್ರಹ್ಮೋತ್ತರಾ | ಹನು ಯಜ್ಞೋದರಾ ವಿಷ್ಣು ಹೃದಯಂ ಸಂವತ್ಸರ ಪ್ರಜನನಮ್ || ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲದೆ ಮತ್ತನ್ಯದೈವಕ್ಕೆರಗಿದಡೆ, ನಾಯಕನರಕ ತಪ್ಪದು.
--------------
ಸಂಗಮೇಶ್ವರದ ಅಪ್ಪಣ್ಣ