ಜನನಮರಣರಹಿತ ನೀನೊಬ್ಬನೆಯೆಂದು
ಸಂಸಾರಭಯಕ್ಕಂಜಿ ಶರಣುಹೊಕ್ಕೆನೆಂದಿತ್ತು ವೇದ.
ತಾರುಣ್ಯದಿಂದ ಸದಾ ರಕ್ಷಿಸುವುದೆಂದು
ಮಾರಾರಿಯನು ಶರಣುಹೊಕ್ಕಿತ್ತು ನೋಡಾ ವೇದ.
ಅಜಾಯತ್ತೇಧಂ ಕಶ್ಚಿತ್ ಭೇದಾತ್ |
ಪ್ರಪದ್ಯೋ ರುದ್ರಯತ್ತೇ ದಕ್ಷಿಣಂ ಮುಖಂ ||
ಎಂದುದು ಶ್ರುತಿವಚನ.
ಇದು ಕಾರಣ, ಅಜ ಹರಿ ಸುರರು ಮೊದಲಾದವರಿಗೆಲ್ಲಾ
ನೀನೆ ಶರಣನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.