ಚಾಂಡಾಲನಾದಡೇನು ಶಿವಭಕ್ತನೆ ಕುಲಜನು.
ಆತನೊಡನೆ ನುಡಿಗಡಣವ ಮಾಡೂದೆನುತಿ[ದೆ] ವೇದ ಶ್ರುತಿ.
ಕುಲವ ನೋಡಲು ಬೇಡ, ಛಲವ ನೋಡಲು ಬೇಡ.
ಎಲ್ಲರಿಂದ ಹಿರಿಯರು ಆತನಿದ್ದಲ್ಲಿ ಇರುತಿಪ್ಪುದೆನುತಿ[ದೆ] ವೇದ.
ಒಂ ಅಪಿ ವಾ ಯಶ್ಚಾಂಡಾಲಶ್ಶಿವ ಇತಿ ವಾಚಂ ವದೇತ್ತೇನ ಸಹ
ಸಂವಿಶೇತ್ತೇನ ಸಹ ಭುಂಜೇತ್ ತೇನ ಸಹ ಸಂವದೇತ್ ||
ಇಂತೆನುತಿದ್ದುದು ಶ್ರುತಿವಾಕ್ಯ.
ನಮ್ಮ ಭಕ್ತರನು ಅವರಿವರೆಂದು ಕುಲವನೆತ್ತಿ ನುಡಿದಂಗೆ,
ಇಪ್ಪತ್ತೇಳುಕೋಟಿನರಕ ತಪ್ಪದು,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ.