ದ ಪದದಿಂದ ಪ್ರಾರಂಭವಾಗುವ ವಚನಗಳು:
ದೈವವೆನಿಸಿಕೊಂಬ ಎಲ್ಲ ದೈವಂಗಳ ಬಿಟ್ಟು,ಶಿವನನೊಬ್ಬನೆ ಹಿಡಿಯೆಂದುದಥರ್ವಣ ವೇದ.ಶಿವನ ಪೂಜಿಸಿ, ಶಿವನ ನೆನೆದು, ಶಿವನ ಸ್ತುತಿಸುವುದೆಂದುದಥರ್ವಣ ವೇದ.`ಈಶೋವಾ ಶಿವ ಏಕೋಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಜೇತ್'ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
ದೇವ ದೇವ ಮಹಾಪ್ರಸಾದ:ನಿಮ್ಮ ಶರಣರ ಮನೆಗೆ ಸಲುಗೆಯ ಬಂಟ ನಾನಲ್ಲಯ್ಯಾ.ತನುಮನಧನವ ಹಿಂದಿಕ್ಕಿಕೊಂಡಿಪ್ಪ ವಂಚಕ ನಾನಯ್ಯಾ.ನಿಮ್ಮ ಶರಣರು ಎನ್ನಿಚ್ಛೆಗೆ ಬಪ್ಪರೆ ?`ಚಕಿತಮಬ್ಥಿದತ್ತೇ ಶ್ರುತಿರಪಿ' ಎನಲು,ಎನ್ನ ನುಡಿ ನಿಮ್ಮ ಶರಣರ ತಾಗಬಲ್ಲುದೆ ?ಹಣೆಯ ಹೊಣೆಯ ತೋರಿ ಉದರವ ಹೊರೆವಂತೆ,ನಿಮ್ಮ ಮರೆಯಲಡಗಿರ್ಪ ಹಡಪಿಗ ನಾನಯ್ಯಾ.ಬಸವಪ್ರಿಯ ಕೂಡಲಚೆನ್ನಸಂಗನ ಶರಣರು ಎನ್ನ ಮಾತಿಗೆ ಬಾರರು,ನೀವೆ ಹೋಗಿ ಬಿಜಯಂಗೈಸಿಕೊಂಡು ಬಾರಾ, ಸಂಗನಬಸವಣ್ಣಾ .
ದೇವಾ ನಿಮ್ಮ ಪರಿಹಾಸ ಪರಿ ಪರಸಮಯಿಗಳ ಮನೆಯಲಿಪ್ಪರೆ.ದೇವಾ ದೇವಾ ನಿಮ್ಮ ಪರಿಹಾಸ ಪರಿಹರಿಸರಿಯೆಂಬಮಾತ ಹುಟ್ಟಿಸುವರೆ ಜಗದಿ.ದೇವಾ ನೀವು ಮಾಡಿದ ಮಾಯೆ ಅಲ್ಲದಿರ್ದಡೆನೊರಜುಗಳ ಸರಿಯೆಂಬರೆ ಹೇಳಾ,ಬಸವಪ್ರಿಯ ಕೂಡಲಚೆನ್ನಸಂಗಮದೇವಾ ?
ದೇವ ದೇವ ಮಹಾಪ್ರಸಾದ:ಕಂಗಳಲ್ಲಿ ಕರುಳಿಲ್ಲ, ಕಾಯದಲ್ಲಿ ಹೊರೆಯಿಲ್ಲ,ನುಡಿಯಲ್ಲಿ ಕಡೆಯಿಲ್ಲ, ನಡೆಯಲ್ಲಿ ಗತಿಯಿಲ್ಲ.ಇದೆಂತಹ ಸುಳುಹೆಂದರಿಯೆ, ಇದೆಂತಹ ನಿಲುವೆಂದು ತಿಳಿಯಬಾರದು.ಮರುಳಿಲ್ಲದ ಮರುಳು, ಅರಿವಿಲ್ಲದ ಅರಿವು.ಬಸವಪ್ರಿಯ ಕೂಡಲಚೆನ್ನಸಂಗನ ಶರಣರ ಬರವುಕೌತುಕವಾಯಿತ್ತು, ಚಿತ್ತೈಸಯ್ಯಾ ಸಂಗನಬಸವಣ್ಣಾ.
ದ್ವಿಜರೊಮ್ಮೆ ಮರೆದು ನೀಳಬೊಟ್ಟನಿಟ್ಟರಾದಡೆ,ಅದರ ಪರಿಯಲೆ ಅಸಿಯ ಗರಗಸವ ಮಾಡಿ,ಯಮಕಿಂಕರರು ಸೀಳುವರೆಂದುದು ನೋಡಾ. ಸ್ಕಾಂದೇ:ಊಧ್ರ್ವಪುಂಡ್ರಂ ದ್ವಿಜಂ ಕುರ್ಯಾತ್ ಲೀಲಯಾಪಿ ಕದಾಚನ |ತಥಾ ಕಾಲೇಣ ಶಸ್ತ್ರೇಣ ಬಾಧ್ಯತೇ ಯಮಕಿಂಕರೈಃ ||ಊಧ್ರ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಂಚಂದ್ರಕಮ್ |ಲಲಾಟೇ ಧಾರಯಿಷ್ಯಂತಿ ಮನುಷ್ಯಾಃ ಪಾಪಕರ್ಮಿಣಃ ||ಇದನರಿದಿನ್ನು ದ್ವಿಜರು ನಂಬಿ, ಬೇಗ ವಿಭೂತಿಯನಿಟ್ಟು ಬದುಕಿ,ಬಸವಪ್ರಿಯ ಕೂಡಲಚೆನ್ನಸಂಗನನೊಲಿಸುವಡೆ.