ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವದನದ್ವಾರಕ್ಕೆ ಗುದದ್ವಾರ ಸರಿಯೆಂದು, ಗುದದ್ವಾರದಲ್ಲಿ ಬಂದುದ ವದನದ್ವಾರದಲ್ಲಿ ಕೊಂಬವಂಗೆ ಹೋ ಹೋ ! ಹರಂಗೆ ಹರಿಯ ಸರಿಯೆನಬಹುದು. ಯಾದಾಸ್ಯಾಪಾನಯೋಃ ಸಾಮ್ಯಂ ಇಂದ್ರತ್ವೇಪಿ ನ ವಿದ್ಯತೇ | ತಥಾ ವಿಷ್ಣ್ವಾದಿ ಬುಧೈಸ್ತು ರುದ್ರಸಾಮ್ಯಂ ನ ವಿದ್ಯತೇ || ಇಂತೆಂದುದಾಗಿ, ಇದು ಕಾರಣ, ಹರಿವಿರಿಂಚಾದಿ ದೇವತೆಗಳನು ಶಿವಂಗೆ ಸರಿಯೆಂದು ಗಳಹುವ ನರಕಿಗಳ ಬಾಯಲಿ ಹುಳು ಸುರಿಯದಿಹವೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ ?
--------------
ಸಂಗಮೇಶ್ವರದ ಅಪ್ಪಣ್ಣ
ವಿಭೂತಿಯಿಂದೆ ಮಾಡಬಹುದು ಅರ್ಬುದಕೋಟಿ ಭಕ್ತರನಾದಡೆಯೂ, ವಿಭೂತಿಯಿಲ್ಲದೆ ಮಾಡಿ ತೋರಿರೆ ಓರ್ವ ದ್ವಿಜನ ? ವಿಭೂತಿಯಿಂದೆ ವಿಪ್ರನಾಗನೆ ಕಬ್ಬಿಲಿತಿಯ ಮಗ ವ್ಯಾಸನು ? ವಿಭೂತಿಯಿಂದಗ್ರಜನಾಗನೆ ಕುಂಭಸಂಭವನು ? ವಿಭೂತಿಯಿಂದೆ ಹಾರುವನಾಗನೆ ಊರ್ವಶಿಗೆ ಹುಟ್ಟಿದ ವಶಿಷ*ನು ? ವಿಭೂತಿಯಿಂದೆ ವಿಶ್ವಾಮಿತ್ರ ಸದ್ಬ್ರಾಹ್ಮಣನಾಗನೆ ? ಉರ್ವಿಯೊಳಗೆ ಮುಂಗಯ್ಯ ಕಂಕಣಕ್ಕೆ ಶುಭ್ರದರ್ಪಣವೇಕೆ ? ವಿಭೂತಿಯನೊಲ್ಲದ ನಿರ್ಭಾಗ್ಯದ್ವಿಜರು, ಸರ್ವಶಾಸ್ತ್ರ ಶ್ರುತಿ ಸ್ಮೃತಿ ಪುರಾಣ ಶಾಪಹತರೆಂದು ಶ್ರುತಿಗಳು ಬೊಬ್ಬಿಡುತ್ತಿವೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ವೇದವೆಂಬ ಅಂಜನವ ನೆಚ್ಚಿಕೊಂಡು, ಶಿವನೆಂಬ ನಿಧಾನವ ಕಾಣಲರಿಯರೀ ದ್ವಿಜರು. ನರಗುರಿಗಳೆತ್ತ ಬಲ್ಲರು ಹೇಳಾ ? ಯಜುರ್ವೇದ: ತದ್ವಿಷ್ಣೋಃ ಪರಮಂ ಪದಂ ಸದಾಪಶ್ಶಂತಿಸೂರಯಃ ಜ್ವಾಲಾಯ ನಮಃ ಜ್ವಲಲಿಂಗಾಯ ನಮಃ ಶ್ರೀರುದ್ರಭಾಷ್ಯೇ: ಉತ್ತಮ ವೇದ ಭೂಶಿಕೋ ದೇವೋತ್ತುಮಾಭ್ಯಂ | ಪ್ರಜವನಮಾಲಂಕೃತಂ ಜಗತ್ಕಾರಣತ್ವೇನ ಜ | ನಯಾಮಸ ಶಿವಸಂಕಲ್ಪೋಪನಿಷದಿ ಪರಾತ್ಪರತರೋ ಬ್ರಹ್ಮಾ ಪರಾತ್ಪರತರೋ ಹರಿಃ ಯತ್ಪಪರಾತ್ಪರತತೋರೀಶ ತನ್ಮೇಃ ಮನಃ ಶಿವಸಂಕಲ್ಪಮಸ್ತು || ಇಂತೆಂದುದಾಗಿ, ಇದು ಕಾರಣ, ಪಾಪಿಂಗೆ ಪರಮಗತಿಯೇಕೊ, ಕುರುಡಗೆ ಕನ್ನಡಿಯೇಕೋ, ಶಿವನ ನಿಜತತ್ವವೇಕೊ ದ್ವಿಜರೆಂಬ ಅರೆಮರುಳುಗಳಿಗೆ ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ ?
--------------
ಸಂಗಮೇಶ್ವರದ ಅಪ್ಪಣ್ಣ
ವೇದಂಗಳೆಲ್ಲವು ಶಿವಲಿಂಗಧಾರಣ ಮಾಡಿಸಿಕೊಂಡವೆಂದು ಹೇಳುತ್ತಿದೆ ವೇದ. ದೇವ ದಾನವ ಮಾನವ ಹರಿವಿರಿಂಚಿಗಳು ಮೊದಲಾಗಿ ಲಿಂಗವ ಪೂಜಿಸಿದರೆಲ್ಲರು ನೋಡಾ. ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿರಿವರ್ಧನಂ | ಉರ್ವಾರುಕಮಿವ ಬಂಧನಾನ್‍ಮೃತ್ಯೋರ್ಮು ಕ್ಷೀಯ ಮಾಮೃತಾತ್ || ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ವೇದ ನಾಲ್ಕನು ಓದಿದಡೇನು ? ಶಾಸ್ತ್ರವ ನೆರೆ ಕೇಳಿದಡೇನು ? ಶಿವಜ್ಞಾನಹೀನರು ಬಲ್ಲರೆ ಭಕ್ತಿಯ ಪಥವನು ? ಅಲೋಡ್ಯಂ ಚ ಚತುರ್ವೇದೀ ಸರ್ವಶಾಸ್ತ್ರವಿಶಾರದಃ | ಶಿವತತ್ವಂ ನ ಜಾನಾತಿ ದರ್ವೀ ಪಾಕರಸಂ ಯಥಾ || ಕ್ಷೀರದೊಳಗಣ ಸಟ್ಟುಗ ಸವಿಸ್ವಾದುಗಳ ಬಲ್ಲುದೆ ? ಓದಿದ ನಿರ್ಣಯವ ನಮ್ಮ ಮಾದಾರ ಚೆನ್ನಯ್ಯ, ಮಡಿವಾಳಯ್ಯ, ಡೋಹರ ಕಕ್ಕಯ್ಯನವರು ಬಲ್ಲರು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ