ವೇದವೆಂಬ ಅಂಜನವ ನೆಚ್ಚಿಕೊಂಡು,
ಶಿವನೆಂಬ ನಿಧಾನವ ಕಾಣಲರಿಯರೀ ದ್ವಿಜರು.
ನರಗುರಿಗಳೆತ್ತ ಬಲ್ಲರು ಹೇಳಾ ? ಯಜುರ್ವೇದ:
ತದ್ವಿಷ್ಣೋಃ ಪರಮಂ ಪದಂ ಸದಾಪಶ್ಶಂತಿಸೂರಯಃ
ಜ್ವಾಲಾಯ ನಮಃ ಜ್ವಲಲಿಂಗಾಯ ನಮಃ
ಶ್ರೀರುದ್ರಭಾಷ್ಯೇ:
ಉತ್ತಮ ವೇದ ಭೂಶಿಕೋ ದೇವೋತ್ತುಮಾಭ್ಯಂ |
ಪ್ರಜವನಮಾಲಂಕೃತಂ ಜಗತ್ಕಾರಣತ್ವೇನ ಜ |
ನಯಾಮಸ ಶಿವಸಂಕಲ್ಪೋಪನಿಷದಿ
ಪರಾತ್ಪರತರೋ ಬ್ರಹ್ಮಾ ಪರಾತ್ಪರತರೋ ಹರಿಃ
ಯತ್ಪಪರಾತ್ಪರತತೋರೀಶ ತನ್ಮೇಃ ಮನಃ ಶಿವಸಂಕಲ್ಪಮಸ್ತು ||
ಇಂತೆಂದುದಾಗಿ, ಇದು ಕಾರಣ, ಪಾಪಿಂಗೆ ಪರಮಗತಿಯೇಕೊ,
ಕುರುಡಗೆ ಕನ್ನಡಿಯೇಕೋ,
ಶಿವನ ನಿಜತತ್ವವೇಕೊ ದ್ವಿಜರೆಂಬ ಅರೆಮರುಳುಗಳಿಗೆ
ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ ?