ಇ ಪದದಿಂದ ಪ್ರಾರಂಭವಾಗುವ ವಚನಗಳು:
ಇಕ್ಷುದಂಡದ ಸಂಪರ್ಕದಲ್ಲಿ ದುತ್ತೂರ ಪಾಮರ ತರು ಬೆಳೆಯಲಿಕ್ಕೆಆ ಇಕ್ಷುದಂಡದ ಸಾರವ ಸಾಗಿಸಬಲ್ಲುದೆ?ಮದೋನ್ಮತ್ತನಲ್ಲಿ ಶ್ರುತಿ ಸ್ಮತಿತತ್ವಸರ್ವಸಾರಯುಕ್ತಿಯ ಲೇಖವಿದ್ಧಡೇನು?ಕ್ರೀ ಶುದ್ಧತೆಯಿಲ್ಲದವನ ವಾಚಾಯುಕ್ತಿಮೃತ್ತಿಕೆಯ ತೆಪ್ಪವ ಮಚ್ಚಿ ಕೆಟ್ಟವನಿರವಾಯಿತ್ತು.ಕಾಲಾಂತಕ ಭೀಮೇಶ್ವರಲಿಂಗವನರಿಯದವನ ಯುಕ್ತಿ.
ಇಕ್ಕಿಕ್ಕುವ ಠಾವಿನಲ್ಲಿ ಮಕ್ಕಳಂತೆ ತಳಿಗೆಯ ತೆಗೆಯದೆ,ಕೊಟ್ಟಹ ಕೊಟ್ಟಹರೆಂದು ಭಟ್ಟರಂತೆ ಅಟ್ಟಳಿಗೊಳಗಾಗದೆ,ಕೊಂಬತೆರದಲ್ಲಿ ಕೊಂಡು ಭಕ್ತಿಯಿಂದ ಬಂದ ತೆರದಲ್ಲಿ ಅನುಕರಿಸಿ,ಪ್ರಸಂಗವ ಕಂಡಕಂಡವರಲ್ಲಿ ಕೊಂಡಾಡದೆ,ಈ ಗುಣ ಹಿಂಗಿ ನಿಂದುದು ಗುರುಚರ ಭಾವ,ಆತ ತಾನೆ ಕಾಲಾಂತಕ ಭೀಮೇಶ್ವರಲಿಂಗವು.