ಸರವಿ ಮಚ್ಚಿದ ವಾಯಪೋಷನ ಇರವಿನಂತೆ,
ಗುಮತಿಯಲ್ಲಿದ್ದ ಅಸಿಯ ಮರೆಯಂತೆ,
ಬೇರಿನ ಮರೆಯಲ್ಲಿದ್ದ ವಿಷನಾಭಿಯಂತೆ,
ನೋಡಿದಡೆ ಭಕ್ತನಾಗಿ, ಒಳಹೊಕ್ಕು ವಿಚಾರಿಸಿದಲ್ಲಿ ಭರಿಯಾಗಿ,
ಸುಣ್ಣದ ಮಣ್ಣಿನಂತೆ, ಅಹಿ ಫಳದ ರೇಖೆಯಂತೆ,
ಕಪಟಕ್ಕೊಳಗಾಗಿ ಇಪ್ಪುದು ಭಕ್ತಿಸ್ಥಲವೆ?
ಮಧುರ ಚೂರ್ಣದಂತೆ ತನ್ಮಯವಾಗಿಪ್ಪುದೆ ಸದ್ಭಕ್ತನಿರವು,
ಕಾಲಾಂತಕ ಭೀಮೇಶ್ವರಲಿಂಗದ ನಿಜ ತತ್ವವಾಸ.